ಧಾರವಾಡ –
ಏಕಾಎಕಿ ಉಕ್ಕಿ ಬಂದ ಹಳ್ಳ ಈ ಒಂದು ಘಟನೆ ಧಾರವಾಡ ಜಿಲ್ಲೆಯಲ್ಲಿ ಕಂಡು ಬಂದಿದೆ.ಹೌದು ಜಿಲ್ಲೆಯ ನವಲಗುಂದ ತಾಲ್ಲೂಕಿನ ಇಬ್ರಾಹಿಂಪೂರ ಗ್ರಾಮದ ಬಳಿ ಘಟನೆ ನಡಿದಿದೆ.ಘಟನೆಯಲ್ಲಿ ಸಂಪರ್ಕವನ್ನು ಕಳೆದುಕೊಂಡು ಪರದಾಡುತ್ತಿದ್ದ ಮಕ್ಕಳನ್ನು ಟ್ಯಾಕ್ಟರ್ ಮೂಲಕ ರಸ್ತೆಯನ್ನು ದಾಟಿಸಲಾಯಿತು.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಇಬ್ರಾಹಿಂ ಪೂರ ಗ್ರಾಮದ ಬಳಿ ನಡೆದ ಘಟನೆ ಇದಾಗಿದ್ದುಧಾರವಾಡ ಹಾಗೂ ಗದಗ ಜಿಲ್ಲೆಯ ಗಡಿ ಭಾಗದಲ್ಲಿ ಇರುವ ಗ್ರಾಮ ವಾಗಿದೆ.
ರಾತ್ರಿ ಸುರಿದ ಮಳೆಗೆ ಈಗ ತುಂಬಿ ಹರಿಯುತ್ತಿದೆ ಹಳ್ಳ ಗ್ರಾಮದ ಅಂಬ್ಲಿ ಹಳ್ಳದಲ್ಲಿ ಏರಿದ ನೀರು ಹಳ್ಳದ ನೀರು ರಸ್ತೆಗೆ ಬಂದು ರಸ್ತೆ ಕಡಿತಗೊಂಡಿತ್ತು ಇದರಿಂದ ರಸ್ತೆ ದಾಟಿ ಶಾಲೆಗೆ ಹೋಗಲು ಆಗದೇ ನಿಂತಿದ್ದರು ಮಕ್ಕಳು.
ಈ ವೇಳೆ ಸ್ಥಳಕ್ಕೆ ಆಗಮಿಸಿದ ರೈತರೊಬ್ಬರು ಹಳ್ಳದ ದಂಡೆಯಲ್ಲಿ ಸಂಪರ್ಕವನ್ನು ಕಳೆದುಕೊಂಡು ಪರದಾಡು ತ್ತಿದ್ದ ಮಕ್ಕಳನ್ನು ರೈತರೊಬ್ಬರು ತಮ್ಮ ಟ್ರ್ಯಾಕ್ಟರ್ ಮೂಲಕ ಹಳ್ಳವನ್ನು ದಾಟಿಸಿದರು.
ಹಳ್ಳ ತುಂಬಿ ಬಂದ ಹಿನ್ನಲೆಯಲ್ಲಿ ರಸ್ತೆ ಕಡಿತಗೊಂಡಿದ್ದ ಹಿನ್ನೆಲೆಯಲ್ಲಿ ಟ್ರ್ಯಾಕ್ಟರ್ ಮೂಲಕ ಎಲ್ಲಾ ಮಕ್ಕಳನ್ನು ರೈತರು ದಾಟಿಸಿದರು.