This is the title of the web page
This is the title of the web page

Live Stream

[ytplayer id=’1198′]

May 2024
T F S S M T W
 1
2345678
9101112131415
16171819202122
23242526272829
3031  

| Latest Version 8.0.1 |

Local News

ಬಿಜೆಪಿಯ ಹಿರಿಯ ನಾಯಕ ರಾಜೇಂದ್ರ ಗೋಖಲೆ ಇನ್ನೂ ನೆನಪು ಮಾತ್ರ –ನಾಯಕನಿಗೆ ಧಾರವಾಡದ ಪಕ್ಷದ ನಾಯಕರಿಂದ ಸಂತಾಪ…..

WhatsApp Group Join Now
Telegram Group Join Now

ಧಾರವಾಡ –

ಕಳೆದ ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಧಾರವಾಡದ ಬಿಜೆಪಿ ನಾಯಕ ರಾಜೇಂದ್ರ ಗೋಖಲೆ ನಿಧನರಾಗಿದ್ದಾರೆ. ಹೌದು ಹಿರಿಯ ಬಿಜೆಪಿ ನಾಯಕ ರಾಜೇಂದ್ರ ಗೋಖಲೆ ಇಂದು ಬೆಳಗಿನ ಜಾವ ಪುಣೆಯಲ್ಲಿ ನಿಧನರಾದರು.ನಿವಾಸದಲ್ಲಿ ಇಂದು ಮುಂಜಾನೆ ಪುಣೆ ಯಲ್ಲಿ ನಿಧನರಾಗಿದ್ದು ದೀರ್ಘಕಾಲದ ಅನಾರೋಗ್ಯದಿಂದ ಬಳಸುತ್ತಿದ್ದರು,ತುರ್ತು ಪರಿಸ್ಥಿತಿಯಲ್ಲಿ ಜೈಲುವಾಸ ಅನು ಭವಿಸಿದರು ಅಖಿಲ ಭಾರತೀಯ ವಿಧ್ಯಾರ್ಥಿ ಪರಿಷತ್ತಿನ ಪೂರ್ಣ ಅವಧಿ ಕಾರ್ಯಕರ್ತರಾಗಿದ್ದರು.

ಪಕ್ಷದ ಸಂಘಟನೆ ಕಾರ್ಯಕರ್ತರೊಂದಿಗೆ ತುಂಬಾ ಉತ್ಸಾಹದಿಂದ ಕೆಲಸ ಕಾರ್ಯವನ್ನು ಮಾಡುತ್ತಿದ್ದರು ಮೃತರಾದ ಇವರ ನಿಧನಕ್ಕೆ ಧಾರವಾಡ ಜಿಲ್ಲೆಯ ಪಕ್ಷದ ಕಾರ್ಯಕರ್ತರು ಮುಖಂಡರು ನಾಯಕರು ಭಾವಪೂರ್ಣ ನಮನವನ್ನು ಸಲ್ಲಿಸಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ,ಜಿಲ್ಲಾ ಉಸ್ತುವಾರಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ,ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್,ಶಾಸಕರಾದ ಅಮೃತ ದೇಸಾಯಿ,ಅರವಿಂದ ಬೆಲ್ಲದ,ಈರೇಸ ಅಂಚಟಗೇರಿ.ಮಹೇಶ ತೆಂಗಿನಕಾಯಿ ಸೇರಿದಂತೆ ಹಲವರು ಅಗಲಿದ ನಾಯಕನಿಗೆ ಭಾವಪೂ ರ್ಣ ನಮನ ಸಲ್ಲಿಸಿ ಭಗವಂತನು ಅವರ ಆತ್ಮಕ್ಕೆ ಶಾಂತಿ ಕೊಡಲಿ ಎಂದು ಪ್ರಾರ್ಥಿಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk