ನಾಗರಹಾವು ಹಿಡಿದು ಕಾಡಿಗೆ ಬಿಟ್ಟು ಆತಂಕ ದೂರ ಮಾಡಿದ ಸ್ನೇಕ್ ವಿನಾಯಕ

Suddi Sante Desk

ಹುಬ್ಬಳ್ಳಿ –

ನಾಗರಹಾವೊಂದು ಕೆಇಬಿ ಕಚೇರಿಯಲ್ಲಿ ಆಗಮಿಸಿ ಎಲ್ಲರಲ್ಲಿಯೂ ಭಯವನ್ನು ಹುಟ್ಟು ಹಾಕಿತ್ತು.ಇದೇ ವೇಳೆಗೆ ಆಗಮಿಸಿದ ಸ್ನೇಕ್ ವಿನಾಯಕ ಜೋಡಳ್ಳಿ ಹಾವನ್ನು ಹಿಡಿದು ಕಾಡಿಗೆ ಬಿಡುವ ಮೂಲಕ ಎಲ್ಲರ ಆತಂಕವನ್ನು ದೂರ ಮಾಡಿದ್ದಾರೆ.

ಹೌದು..ಧಾರವಾಡದ ಸವದತ್ತಿ ರಸ್ತೆಯಲ್ಲಿರುವ ಕೆಇಬಿ ಕಚೇರಿಯಲ್ಲಿ ನಾಗರಹಾವು ಒಳನುಗ್ಗಿತ್ತು.

ಇದರಿಂದ ಸಿಬ್ಬಂದಿಗಳು ಸ್ನೇಕ್ ವಿನಾಯಕ ಜೋಡಳ್ಳಿಯವರಿಗೆ ಕರೆ ಮಾಡಿದರು.ಸ್ಥಳಕ್ಕೆ ಆಗಮಿಸಿದ ವಿನಾಯಕ ಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು ಕಾಡಿಗೆ ಬಿಟ್ಟಿದ್ದಾರೆ.

ಇಲ್ಲಿಯವರೆಗೂ ಸುಮಾರು ಎರಡು ಸಾವಿರ ಹಾವನ್ನು ವಿನಾಯಕ ಜೋಡಳ್ಳಿಯವರು ಹಿಡಿದಿರುವುದು ವಿಶೇಷವಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.