ಬೆಂಗಳೂರು –
ರಾಜ್ಯದಲ್ಲಿನ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹೋರಾಟಕ್ಕೆ ಮುಂದಾ ಗುತ್ತಿದೆ. ಹೌದು ಈವರೆಗೆ ರಾಜ್ಯ ಸರ್ಕಾರದಿಂದ ಬೇಡಿಕೆ ಗಳ ಈಡೇರಿಕೆ ಕುರಿತಂತೆ ಕಾದು ಕಾದು ಬೇಸತ್ತಿದ್ದು ಈಗ ಅನಿವಾರ್ಯವಾಗಿ ಹೋರಾಟ ಮಾಡೊದು ಒಂದೇ ಬಾಕಿ ಇದೆ
ಇದಕ್ಕೆ ನೀವು ಅನುಮೋದನೆ ಕೊಡಬೇಕು ಸರ್ಕಾರಿ ನೌಕರರ ಸಂಘದ ಪರಿಷತ್ ಸಭೆಯಲ್ಲಿ ಷಡಾಕ್ಷರಿ ಅವರು ಶಿಕ್ಷಕರ ಅನುಮೋದನೆಯನ್ನು ತಗೆದುಕೊಂಡಿದ್ದು ಇದರ ಬೆನ್ನಲ್ಲೇ ಈಗ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವರು ಷಡಾಕ್ಷರಿ ಅವರ ಮನೆಗೆ ಹೋಗಿ ಹೋರಾಟದ ಕುರಿತಂತೆ ಚರ್ಚೆ ಮಾಡಿ ಅಂತಿಮವಾದ ಪ್ಲಾನ್ ಮಾಡಿದ್ದಾರೆ
ಹೀಗಾಗಿ ರಾಜ್ಯದಲ್ಲಿನ ಶಿಕ್ಷಕರ ಸಮಸ್ಯೆಗಳ ಕುರಿತಂತೆ ಇನ್ನೂ ಯಾವುದೇ ಕಾರಣಕ್ಕೂ ಮನವಿ ಕೊಡೋದು ಹೋರಾಟ ಮಾಡೊದು ಮುಗಿದಿದ್ದು ಈಗೇನಿದ್ದರೂ ಅಖಾಡಕ್ಕೆ ಇಳಿಯೊದು ಒಂದೇ ಬಾಕಿ ಇದೆ ಎನ್ನುತ್ತಾ ಸರ್ಕಾರಿ ನೌಕರರ ಸಂಘವು ಮತ್ತು ರಾಜ್ಯಾಧ್ಯಕ್ಷರು ರಾಜ್ಯದ ಶಿಕ್ಷಕರ ಬೆನ್ನಿಗೆ ನಿಲ್ಲುತ್ತಿದ್ದಾರೆ