ಶಾಲಾ ವಾಹನದಿಂದ ಬಿದ್ದು ವಿದ್ಯಾರ್ಥಿನಿ ಸಾವು – ದಾಖಲಾಯಿತು ದೂರು ಪೊಲೀಸರಿಂದ ತನಿಖೆ ಆರಂಭ

Suddi Sante Desk
ಶಾಲಾ ವಾಹನದಿಂದ ಬಿದ್ದು ವಿದ್ಯಾರ್ಥಿನಿ ಸಾವು – ದಾಖಲಾಯಿತು ದೂರು ಪೊಲೀಸರಿಂದ ತನಿಖೆ ಆರಂಭ

ರಾಮನಗರ

ಶಾಲಾ ವಾಹನದಿಂದ Ukg ವಿದ್ಯಾರ್ಥಿನಿಯೊ ಬ್ಬಳು ಸಾವಿಗೀಡಾದ ಘಟನೆ ರಾಮನಗರದಲ್ಲಿ ನಡೆದಿದೆ.ಶಾಲಾ ಬಸ್ ನಿಂದ ವಿದ್ಯಾರ್ಥಿನಿ ಶಾಲಾ ಬಸ್ ನಿಂದ ಬಿದ್ದು ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನಲ್ಲಿ ಸಂಭವಿಸಿದೆ.ರಾಮನಹಳ್ಳಿ ಗ್ರಾಮದ ಶ್ರೀ ಸಾಯಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಯುಕೆಜಿ ಓದುತ್ತಿದ್ದ ರಕ್ಷ ಎಂಬ ಬಾಲಕಿ ಚಾಲಕ ಮತ್ತು ಆಯಾಳ ಬೇಜಾಬ್ದಾರಿ ತನದಿಂದ ಸಾವನ್ನಪ್ಪಿರುವ ಘಟನೆ ಪಿಚ್ಚನಗೆರೆ ಗ್ರಾಮದ ಬಳಿ ನಡೆದಿದೆ.

ಶಾಲೆ ಮುಗಿಸಿ ಬಸ್ ನಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವಾಗ ವಿದ್ಯಾರ್ಥಿಗಳನ್ನು ಇಳಿಸಿ ಮುಂದೆ ಸಾಗಬೇಕಾದರೆ ಶಾಲಾ ಸಿಬ್ಬಂದಿ ಯು ಬಸ್ ನ ಬಾಗಿಲು ಹಾಕದೇ ನಿರ್ಲಕ್ಷ ತೋರಿ ದ್ದಾರೆ ಎಂದು ಆರೋಪ ಕೇಳಿ ಬಂದಿದೆ.ಚಾಲಕ ತಿರುವಿನಲ್ಲಿ ಬ್ರೇಕ್ ಹಾಕಿದಾಗ ಸೀಟಿನಲ್ಲಿ ಕುಳಿ ತಿದ್ದ ವಿದ್ಯಾರ್ಥಿ ಕೆಳಗೆ ಬಿದ್ದು ವಾಹನದ ಹಿಂಬದಿ ಚಕ್ರ ತಲೆಯ ಮೇಲೆ ಹರಿದು ಸಾವನ್ನಪ್ಪಿ ದ್ದಾಳೆ.

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆ ನಂತರ ಚಾಲಕ ಹಾಗೂ ಅಯಾ ಪರಾರಿ ಯಾಗಿದ್ದಾರೆ.ಕನಕಪುರ ಗ್ರಾಮಾಂತರ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ಸುದ್ದಿ ಸಂತೆ ನ್ಯೂಸ್ ರಾಮನಗರ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.