This is the title of the web page
This is the title of the web page

Live Stream

[ytplayer id=’1198′]

February 2025
T F S S M T W
 12345
6789101112
13141516171819
20212223242526
2728  

| Latest Version 8.0.1 |

State News

ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ಹಸಿರು ದಿನಾಚರಣೆ ಆಚರಣೆ – ಜಾಗೃತಿ ಜಾಥಾ ದಲ್ಲಿ ಶಿಕ್ಷಕರೊಂದಿಗೆ ಪಾಲ್ಗೊಂಡ ವಿದ್ಯಾರ್ಥಿಗಳು…..

ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ಹಸಿರು ದಿನಾಚರಣೆ ಆಚರಣೆ – ಜಾಗೃತಿ ಜಾಥಾ ದಲ್ಲಿ ಶಿಕ್ಷಕರೊಂದಿಗೆ ಪಾಲ್ಗೊಂಡ ವಿದ್ಯಾರ್ಥಿಗಳು…..
WhatsApp Group Join Now
Telegram Group Join Now

ರಬಕವಿ ಬನಹಟ್ಟಿ

ವಿದ್ಯಾರ್ಥಿಗಳಿಗೆ ಗಿಡ ಮರಗಳನ್ನು ಬೆಳೆಸುವುದು, ಪರಿಸರ ರಕ್ಷಣೆ, ಪ್ಲಾಸ್ಟಿಕ್ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಿದರೆ ಭವಿಷ್ಯದಲ್ಲಿ ಉತ್ತಮ ಪರಿಸರ ನಿರ್ಮಾಣ ಸಾಧ್ಯ ಎಂದು ಜಗದಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಎ.ಐ.ಸಿಂದೆ ತಿಳಿಸಿದರು.

ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಬುಧವಾರ ಹಮ್ಮಿಕೊಂಡ ರಾಷ್ಟ್ರೀಯ ಹಸಿರು ದಿನಾಚರಣೆಯ ಅಂಗವಾಗಿ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಶಿಕ್ಷಕಿ ಮಂಜುಳಾ ಹೂಗಾರ ಮಾತನಾಡಿ, ‘ಶಾಲೆಯಲ್ಲಿ ಹಸಿರು ಪಡೆಯ ವಿದ್ಯಾರ್ಥಿಗಳ ಮೂಲಕ ಸ್ವಚ್ಛತೆ, ಗಿಡ ಮರಗಳ ರಕ್ಷಣೆ, ಶಾಲೆಯಲ್ಲಿ ಹಸಿರು ಎಲೆಗಳ ಮೂಲಕ ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಪರಿಸರ ವೀಕ್ಷಣೆ  ಯಂತಹ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇವು ವಿದ್ಯಾರ್ಥಿಗಳ ಮೇಲೆ ಸಾಕಷ್ಟು ಪ್ರಭಾವ ಬೀರುತ್ತವೆ ಎಂದರು.

ಸಿ.ವಿ. ಕುಲಕರ್ಣಿ, ಎಸ್.ಎಂ. ವಾಲಿ, ಎಸ್.ಎಸ್. ಬುಗಟ್ಯಾಗೋಳ, ಡಿ.ಎ. ದಿಲ್ವಾರನಾಯಕ, ಜೆ.ಎಂ. ಮುಂಡಗನೂರ, ವಿ.ಬಿ. ಪೂಜಾರ, ಎಸ್.ಜಿ. ಪವಾರ, ಸದಾಶಿವ ದಳವಾಯಿ ಮತ್ತು ಎನ್.ಐ. ಮಠಪತಿ ಇದ್ದರು.

ಸುದ್ದಿ ಸಂತೆ ನ್ಯೂಸ್ ರಬಕವಿ ಬನಹಟ್ಟಿ…..


Google News

 

 

WhatsApp Group Join Now
Telegram Group Join Now
Suddi Sante Desk