- ನೀಡಲು ಬಂದಿದ್ದ ವ್ಯಕ್ತಿಯೊಬ್ಬರ ಮಗಳೊಂದಿಗೆ ಕೆಟ್ಟದಾಗಿ ವರ್ತನೆ ಮಾಡಿದ ಆರೋಪದ ಮೇಲೆ ಹೆಡ್ ಕಾನ್ಸಟೇಬಲ್ ರೊಬ್ಬರನ್ನು ಅಮಾನತು ಮಾಡಿರುವ ಘಟನೆ ವಿಜಯನಗರ ಜಿಲ್ಲೆಯಲ್ಲಿ ನಡೆದಿದೆ.ಹೌದು ಪ್ರಕರಣವೊಂದರಲ್ಲಿ ದೂರು ನೀಡಲು ಬಂದ ವ್ಯಕ್ತಿಯ ಮಗಳ ಜೊತೆ ಹೆಡ್ ಕಾನ್ಸೆಟೇಬಲ್ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕ್ರಿಯೆಗೆ ಒತ್ತಾಯ ಮಾಡಿದ್ದರಂತೆ, ಅನುಚಿತವಾಗಿ ವರ್ತಿಸಿದ ಹೆಡ್ ಕಾನಸ್ಟೇಬಲ್ ಆರೋಪಿ ಮಾರೆಪ್ಪನನ್ನು ವಿಜಯನಗರ ಪೊಲೀಸ್ ವರಿಷ್ಠಾಧಿಕಾರಿ ಅಮಾನತ್ತು ಮಾಡಿ ಆದೇಶ ಹೊರಡಿಸಿದ್ದಾರೆ. ಹೆಡ್ ಕಾನಸ್ಟೇಬಲ್ ಮಾರೆಪ್ಪ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಸೇವೆಯಲ್ಲಿದ್ದರು. ಲೈಂಗಿಕ ಕ್ರಿಯೆಗೆ ಸಹಕರಿಸಿದರೆ ಕೇಸ್ ನಿಮ್ಮ ಕಡೆ ಮಾಡುತ್ತೇನೆ ಎಂದು ಹೆಡ್ ಕಾನ್ಸಟೇಬಲ್ ಆಮಿಷವೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.ಜಾತಿ ವಿಚಾರ ಬಳಸಿ ಬುಟ್ಟಿಗೆ ಹಾಕಿಕೊಳ್ಳಲು ಆರೋಪಿ ಮಾರೆಪ್ಪ ಯತ್ನಿಸಿದ್ದ ಮೊಬೈಲ್ ಕರೆ ಮಾಡಿ ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಒತ್ತಾಯ ಮಾಡಿದ ಆರೋಪ ಕೇಳಿಬಂದಿದೆ.ಮಾರೆಪ್ಪ ಇದನ್ನೆಲ್ಲಾ ತೆಲುಗಿನಲ್ಲಿ ಸಂಭಾಷಣೆ ನಡೆಸಿದ್ದ. ನಿನ್ನ ಮೇಲೆ ಮನಸ್ಸಾಗಿದೆ. ಎಲ್ಲಾದರೂ ಹೋಗಿ ಇಬ್ಬರೂ ಸೇರೋಣ ಅಂತ ಮಾರೆಪ್ಪ ಒತ್ತಾಯಿಸಿದ್ದನಂತೆ. ಲೈಂಗಿಕ ಸಮ್ಮತಿಗೆ ಒತ್ತಾಯ ಮಾಡಿದ ದೂರಿನ ಮೇರೆಗೆ ವಿಜಯನಗರ ಜಿಲ್ಲೆಯ ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
Suddi Sante > Local News > ಹೆಡ್ ಕಾನ್ಸಟೇಬಲ್ ಅಮಾನತು – ದೂರು ಕೇಳಿ ಬಂದ ಬೆನ್ನಲ್ಲೇ ಅಮಾನತು ಮಾಡಿ ಆದೇಶ ವಿಜಯನಗರ -
ಹೆಡ್ ಕಾನ್ಸಟೇಬಲ್ ಅಮಾನತು – ದೂರು ಕೇಳಿ ಬಂದ ಬೆನ್ನಲ್ಲೇ ಅಮಾನತು ಮಾಡಿ ಆದೇಶ ವಿಜಯನಗರ -
Suddi Sante Desk23/09/2022
posted on