ಕರ್ನಾಟಕ ರಾಜ್ಯ ಶಿಕ್ಷಕರ ಪರಿಷತ್ ಕಾರ್ಯದರ್ಶಿ ಯಾಗಿ ಶಿಕ್ಷಕ ಎಲ್ ಐ ಲಕ್ಕಮ್ಮನವರ ನೇಮಕ – ನವೆಂಬರ್ 8 ರಂದು ಬೆಂಗಳೂರಿ ನಲ್ಲಿ ಪದಗ್ರಹಣ…..

Suddi Sante Desk

ಧಾರವಾಡ –

ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ತಿನ ರಾಜ್ಯ ಸಂಘಟನೆಯ ಕಾರ್ಯದರ್ಶಿಯಾಗಿ ಧಾರವಾಡ ಜಿಲ್ಲೆಯ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶಿಕ್ಷಕ ಎಲ್ ಐ ಲಕ್ಕಮ್ಮನವರ ಆಯ್ಕೆಯಾಗಿದ್ದಾರೆ‌.ಹೌದು ರಾಜ್ಯದ ಪ್ರಮುಖ ಶಿಕ್ಷಕರ ಸಂಘಗಳ ಸಹಯೋಗದಲ್ಲಿ ಕರ್ನಾಟಕ ರಾಜ್ಯ ಶಿಕ್ಷಕರ ಸಂಘಗಳ ಪರಿಷತ್ತು ಅಕ್ಟೋಬರ್‌ 30. ರಂದು ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಡಾ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ಉದ್ಘಾಟನೆ ಯಾಯಿತು ಇದೇ ಸಂದರ್ಭದಲ್ಲಿ ರಾಜ್ಯ ಘಟಕದ ಪದಾಧಿ ಕಾರಿಗಳಿಗೆ ಪದಗೃಹಣ ಸಮಾರಂಭವನ್ನು ಏರ್ಪಡಿಸಿ, ಪದಾಧಿಕಾರಿಗಳಿಗೆ ಸತ್ಕರಿಸಲಾಯಿತು.ಧಾರವಾಡ ಜಿಲ್ಲೆ ಯಿಂದ ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಶಿಕ್ಷಕ ಎಲ್ ಐ ಲಕ್ಕಮ್ಮನವರ ಇವರನ್ನು ರಾಜ್ಯ ಸಂಘಟನೆಯ ಕಾರ್ಯದರ್ಶಿಯಾಗಿ ರಾಜ್ಯ ಘಟಕಕ್ಕೆ ಆಯ್ಕೆ ಮಾಡಲಾ ಯಿತು

ರಾಜ್ಯಾದ್ಯಕ್ಷ ಗುರು ತಿಗಡಿ ಪ್ರದಾನ ಕಾರ್ಯದರ್ಶಿ ಅಶೋಕ ಸಜ್ಜನ ತಿಳಿಸಿದ್ದಾರೆ.ಇನ್ನೂ ಧಾರವಾಡದ ಕಾರ್ಯಕ್ರಮಕ್ಕೆ ಅನಿವಾರ್ಯ ಕಾರಣದಿಂದ ಹಾಜರಾಗದ ರಾಜ್ಯ ಘಟಕದ ಪದಾಧಿಕಾರಿಗಳು ಹಾಗೂ ಇದು ವರೆಗೆ ಆಯ್ಕೆಯಾದ ಜಿಲ್ಲಾ ಅದ್ಯಕ್ಷರು ಪ್ರದಾನ ಕಾರ್ಯದರ್ಶಿಗಳಿಗೆ ನವೆಂಬರ್ 8 ರಂದು ಬೆಂಗಳೂರಿನ ರಾಜ್ಯ ಸರ್ಕಾರಿ ನೌಕರರ ಭವನ ದಲ್ಲಿ ಜರುಗಲಿರುವ ಸಭೆಯಲ್ಲಿ ಆದೇಶ ಪ್ರತಿ ನೀಡಿ ಗೌರವಿಸಿ ಸತ್ಕರಿಸಲಾಗುವುದು ಎಂದು ರಾಜ್ಯ ಕೋಶಾ ದ್ಯಕ್ಷ ಶಂಕರ ಘಟ್ಟಿ ತಿಳಿಸಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.