ಶಿಕ್ಷಕ ರಂಗಸ್ವಾಮಿ ಆತ್ಮಹತ್ಯೆ – ನಿವೃತ್ತಿಯಾಗಲು ಮೂರು ವರ್ಷ ಬಾಕಿ…..ಅನುಮಾನ ಹುಟ್ಟಿಸಿದೆ ಆತ್ಮಹತ್ಯೆ…..

Suddi Sante Desk
ಶಿಕ್ಷಕ ರಂಗಸ್ವಾಮಿ ಆತ್ಮಹತ್ಯೆ – ನಿವೃತ್ತಿಯಾಗಲು ಮೂರು ವರ್ಷ ಬಾಕಿ…..ಅನುಮಾನ ಹುಟ್ಟಿಸಿದೆ ಆತ್ಮಹತ್ಯೆ…..

ಹಾಸನ

ಲಾಡ್ಜ್‌ನಲ್ಲಿ ನೇಣು ಬಿಗಿದುಕೊಂಡು ಶಿಕ್ಷಕರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾಸನ ದಲ್ಲಿ ನಡೆದಿದೆ ರಂಗಸ್ವಾಮಿ (57) ಆತ್ಮಹತ್ಯೆಗೆ ಶರಣಾದ ಶಿಕ್ಷಕರಾಗಿದ್ದು ಹಾಸನ ನಗರದ ಬಿ.ಎಂ.ರಸ್ತೆಯಲ್ಲಿರುವ ಗೋಕುಲ್‌ ಲಾಡ್ಜ್‌ನಲ್ಲಿ ಈ ಒಂದು ಘಟನೆ ನಡೆದಿದೆ. ಗೋಕುಲ್‌ ಲಾಡ್ಜ್‌ನಲ್ಲಿ ರೂಂ ಪಡೆದು ಉಳಿದುಕೊಂಡಿದ್ದ ಶಿಕ್ಷಕ ರಂಗಸ್ವಾಮಿ

ಬೇಲೂರು ತಾಲ್ಲೂಕಿನ, ತೊಳಲು ಗ್ರಾಮದ ಸರ್ಕಾರಿ ಶಾಲೆಯಲ್ಲಿ ಶಿಕ್ಷಕನಾಗಿ ಕೆಲಸ ಮಾಡುತ್ತಿದ್ದ ರಂಗಸ್ವಾಮಿ ನಿವೃತ್ತಿಯಾಗಲು ಮೂರು ವರ್ಷ ಮಾತ್ರ ಬಾಕಿಯಿತ್ತು ಶಿಕ್ಷಕ ರಂಗಸ್ವಾಮಿ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ.ಇನ್ನೂ ಈ ಒಂದು ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಕೆ.ಆರ್.ಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸುದ್ದಿ ಸಂತೆ ನ್ಯೂಸ್ ಹಾಸನ……

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.