ಶಿಕ್ಷಕ ಅಮಾನತು ಶಿಕ್ಷಕ ದಿನೇಶ್ ಕುಮಾರ್ ರನ್ನು ಅಮಾನತು ಮಾಡಿ ಆದೇಶ…..

Suddi Sante Desk

ಛತ್ತೀಸಗಡ –

ಛತ್ತೀಸ್ ಗಢದ ಜಸ್ಪುರದ ಶಾಲಾ ಶಿಕ್ಷಕನೊಬ್ಬ ಶಾಲೆ ಯನ್ನೇ ಬಾರ್ ಮಾಡಿಕೊಂಡು ಕುಡಿದು ಮಲಗಿದ್ದು ಆತನ್ನು ಅಮಾನತುಗೊಳಿಸಲಾಗಿದೆ.ಹೌದು ದಿನೇಶ್ ಕುಮಾರ್ ಅಮಾನತುಗೊಂಡ ಶಿಕ್ಷಕರಾಗಿದ್ದಾರೆ.ಜಸ್ಪುರ ಜಿಲ್ಲೆಯ ಕಸ್ತೂರ ಡೆವಲಪ್ಮೆಂಟ್ ಬ್ಲಾಲ್ ನ ಸರ್ಕಾರಿ ಪೂರ್ವ ಪ್ರೌಢಶಾಲೆಯಲ್ಲಿ ಶಿಕ್ಷಕನಾಗಿರುವ ದಿನೇಶ್ ಕುಮಾರ್ ಮದ್ಯಪಾನ ಮಾಡಿ ಶಾಲೆಗೆ ಬರುತ್ತಿದ್ದ.ಅಲ್ಲದೆ, ಶಾಲೆಯಲ್ಲಿ ಮದ್ಯ ಸೇವಿಸಿ ಬಾಲಕಿಯರು,ಬಾಲಕರನ್ನು ಬ್ಯಾಟ್ ನಿಂದ ಥಳಿಸುತ್ತಿದ್ದರಂತೆ

ಈ ಶಿಕ್ಷಕನ ದುರ್ನಡತೆಯ ಬಗ್ಗೆ ದೂರು ಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಶಿಕ್ಷಕ ಮದ್ಯಪಾನ ಮಾಡಿ ವಿದ್ಯಾ ರ್ಥಿಗಳನ್ನು ಥಳಿಸಿದ್ದಲ್ಲದೆ ದುರ್ನಡತೆ ತೋರಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳಿಗೆ ವರದಿ ನೀಡಲಾಗಿದೆ. ಈ ವರದಿ ಆಧರಿಸಿ ಜಿಲ್ಲಾಧಿಕಾರಿ ಅಮಾ ನತು ಆದೇಶ ಹೊರಡಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.