ಅಧಿವೇಶನದಲ್ಲಿ ಮಂಡನೆ ಯಾಯಿತು ಶಿಕ್ಷಕರ ವರ್ಗಾವಣೆ ವಿಧೇಯಕ – ಶಿಕ್ಷಣ ಸಚಿವರಿಂದ ಮಂಡನೆ ನಿಜವಾಯಿತು ಸುದ್ದಿ ಸಂತೆಯ ವರದಿ…..

Suddi Sante Desk

ಬೆಳಗಾವಿ –

ಕೊನೆಗೂ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ತುಂಬಾ ನಿರೀಕ್ಷೆಯನ್ನಿಟ್ಟುಕೊಂಡಿದ್ದ ಶಿಕ್ಷಕರ ವರ್ಗಾವಣೆ ವಿಧೇಯಕ ಮಂಡನೆಯಾಯಿತು.ಶಿಕ್ಷಣ ಸಚಿವ ಬಿ ಸಿ ನಾಗೇಶ್ ಅವರು ಈ ಒಂದು ವರ್ಗಾವಣೆಯ ಬಿಲ್ ನ್ನು ಬೆಳಗಾವಿ ಯ ಮಂಡನೆ ಮಾಡಿದು. ಕೆಳ ಮನೆಯಲ್ಲಿ ಇಂದು ವರ್ಗಾವಣೆಯ ವಿಧೇಯಕವನ್ನು ಪ್ರಸ್ತಾಪನೆ ಮಾಡಿದರು ಮಹತ್ವದ ಈ ಒಂದು ಬಿಲ್ ಗೆ ಸರ್ವ ಸದಸ್ಯರು ಒಪ್ಪಿಗೆ ಯನ್ನು ನೀಡಿದರು.

ಇದರೊಂದಿಗೆ ಮಹತ್ವದ ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕವಾದ ವರ್ಗಾವಣೆ ಯ ಕಾಯ್ದೆ ಬದಲಾವಣೆ ಯಾಗಲಿದ್ದು ಇದರಿಂದ ರಾಜ್ಯದ ಶಿಕ್ಷಕರ ಸಂತಸಗೊಂಡಿದ್ದು ಇದರಿಂದಾಗಿ ವರ್ಗಾವಣೆ ಸಿಗದೇ ಸ್ವತಂ ಜಿಲ್ಲೆಗೆ ವರ್ಗಾವಣೆ ಇಲ್ಲದೇ ಪರದಾಡುತ್ತಿರುವ ನಾಡಿನ ಶಿಕ್ಷಕರಿಗೆ ಇದರೊಂದಿಗೆ ಸಂತೋಷದ ಸುದ್ದಿ ಸಿಕ್ಕಿದ್ದು ಶಿಕ್ಷಣ ಸಚಿವರಿಂದ ವಿಧೆಯೇಕ ಮಂಡನೆಯಾ ಯಿತು ಸರ್ವಾನುಮತದಿಂದ ಅನುಮೋದನೆಯಾಯಿತು.

ತಿದ್ದುಪಡಿ ಆದೇಶ & ಮಾರ್ಗದರ್ಶಿ ಶೀಘ್ರವೇ ಬಿಡುಗಡೆ ಯಾಗಬೇಕಿದೆ.ಈ ನಿಟ್ಟಿನಲ್ಲಿ ಅವಿರತ ಪ್ರಯತ್ನ ನಡೆಸಿದ ನೌಕರ ಸಂಘದ ಅಧ್ಯಕ್ಷರಾದ ಷಡಾಕ್ಷರಿ ರವರಿಗೆ ಹಾಗೇ ಶಿಕ್ಷಣ ಸಚಿವರಿಗೆ ನಾಡಿನ ಶಿಕ್ಷಕರು ಧನ್ಯವಾದಗಳನ್ನು ಹೇಳಿದ್ದಾರೆ.ಇನ್ನೂ ಈ ಒಂದು ವಿಚಾರ ಕುರಿತಂತೆ ಸುದ್ದಿ ಸಂತೆ ಒಂದು ವರದಿಯನ್ನು ಮಾಡಿತ್ತು ಎರಡು ದಿನಗಳಲ್ಲಿ ಈ ಒಂದು ವರದಿ ಮಂಡನೆಯಾಗುತ್ತದೆ ಎಂದು ವರದಿ ಮಾಡಿತ್ತು ಕೊನಗೂ ಇಂದು ಮಂಡನೆಯಾಗಿದ್ದು ವರದಿ ನಿಜವಾಗಿದ್ದು ಇದು ನಿಖರವಾದ ಸುದ್ದಿ ಸಂತೆಯ ಕಾರ್ಯಕ್ಕೆ ಕೈಗನ್ನಡಿ ಆಗಿದ್ದು ಪ್ರಕಟಗೊಂಡು ಜಾರಿಗೆ ಬಂದರೆ ನಾಡಿನ ಶಿಕ್ಷಕರಿಗೆ ಅನುಕೂಲ ಆಗಲಿ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.