OTS ಗಾಗಿ ಮಾಡು ಇಲ್ಲವೇ ಮಡಿ ಹೋರಾಟಕ್ಕೆ ನಿರ್ಧಾರ ಕೈಗೊಂಡ ಶಿಕ್ಷಕರು – ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ,ಮತ್ತು ಮಹೇಶ್ ಮಡ್ಡಿ ಅವರ ನೇತ್ರತ್ವದಲ್ಲಿ ನಾಳಿನ ಸಭೆಯಲ್ಲಿ ಪೈನಲ್ ಆಗಲಿದೆ ದಿನಾಂಕ…..

Suddi Sante Desk

ಬೆಂಗಳೂರು –

OTS ಶಿಕ್ಷಕರಿಂದ ಕ್ಲಬ್ ಹೌಸ್ ಸಭೆ ಮುಖಾಂತರ ತಮ್ಮ ಕಷ್ಟವನ್ನ ನೋವನ್ನು ಸರ್ಕಾರಕ್ಕೆ ಮತ್ತೊಮ್ಮೆ ಸಾಬೀತಪ ಡಿಸಲು ಸಭೆ ಏರ್ಪಾಡು ಮಾಡಿ ಅಂತಿಮವಾದ ನಿರ್ಧಾರ ವನ್ನು ತೆಗೆದುಕೊಳ್ಳಲಾಗುವುದು ಎಂದು ಗ್ರಾಮೀಣ ಪ್ರೌಢ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಪವಾಡೆಪ್ಪ ಮತ್ತು ಮಹೇಶ ಶಿಕ್ಷಕರ ಬಳಗದಿಂದ ಕರೆ ನೀಡಲಾಗಿದೆ

ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ಆಗುತ್ತಿರುವ ವರ್ಗಾವಣೆಯ ಈ ಅನ್ಯಾಯವನ್ನು ನೋವನ್ನ ಕಷ್ಟವನ್ನ ಸಾಬೀತುಪಡಿಸಲು ವೇದಿಕೆ ಸಿದ್ಧತೆ ಮಾಡುತ್ತಿದ್ದಾರೆ ಈಗಾಗಲೇ ಮಂತ್ರಿಗಳಿಂದ ಶಾಸಕರಿಂದ ಮುಖ್ಯಮಂತ್ರಿಗಳ ಕಚೇರಿಗೆ ಶಿಕ್ಷಣ ಸಚಿವರ ಕಚೇರಿಗೆ ಶಿಫಾರಸು ಪತ್ರಗಳನ್ನು ನೀಡಿದ್ದು ವರ್ಗಾವಣೆಯಿಲ್ಲದೆ ಚಿಂತೆಯಲ್ಲಿ ಕೊರಗುತ್ತಿದ್ದ ಶಿಕ್ಷಕರು ಈಗ ಸಂಘಟನಾತ್ಮಕ ಹೋರಾಟಕ್ಕೆ ವೇದಿಕೆ ಸಿದ್ಧ ಮಾಡಿಕೊಂಡಿದ್ದಾರೆ

ತಮಗೆ ಆಗಿರುವ ಅನ್ಯಾಯವನ್ನು ಕಷ್ಟವನ್ನ ತಮ್ಮ ಕುಟುಂ ಬದಿಂದ ದೂರು ಆಸರೆಯಿಲ್ಲದೆ ಸಾಕಷ್ಟು ಅನಾರೋಗ್ಯ ಪೀಡಿತ ರಾಗಿ ಶಿಕ್ಷಕರ ಜೀವನ ವರ್ಗಾವಣೆಯಿಲ್ಲದೆ ನರಕಯಾತನೆ ಯಾಗಿದೆ ಓಟಿಎಸ್ ಮಾಡಲೇಬೇಕೆಂದು ನಮ್ಮ ಕಷ್ಟವನ್ನು ಕ್ಲಬ್ ಹೌಸ್ ಮುಖಾಂತರ ಸರ್ಕಾರಕ್ಕೆ ಮತ್ತೊಮ್ಮೆ ಸಾಬೀತು ಪಡಿಸಲು ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡಪ್ಪ ಹಾಗೂ ಮಹೇಶ ಬಳಗದ ಶಿಕ್ಷಕರು ಸಿದ್ಧತೆ ಮಾಡಿಕೊಂಡಿದ್ದಾರೆ ನಾಳೆ ಸಭೆ ನಡೆಯಲಿದ್ದು ಅಂತಿಮವಾಗಿ ನಿರ್ಧಾರ ನಿರ್ಣಯ ಪೈನಲ್ ಆಗಲಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.