This is the title of the web page
This is the title of the web page

Live Stream

[ytplayer id=’1198′]

October 2024
T F S S M T W
 12
3456789
10111213141516
17181920212223
24252627282930
31  

| Latest Version 8.0.1 |

State News

ಭೀಕರ ಅಪಘಾತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಸಾವು – ಗಂಭೀರವಾಗಿ ಗಾಯಗೊಂಡ ಮೂವರು…..ಕಾರು ಲಾರಿ ಮುಖಾಮುಖಿ ಡಿಕ್ಕಿ…..

ಭೀಕರ ಅಪಘಾತ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ ಸಾವು – ಗಂಭೀರವಾಗಿ ಗಾಯಗೊಂಡ ಮೂವರು…..ಕಾರು ಲಾರಿ ಮುಖಾಮುಖಿ ಡಿಕ್ಕಿ…..
WhatsApp Group Join Now
Telegram Group Join Now

ಹಿರಿಯೂರು

ಲಾರಿಗೆ ಕಾರೊಂದು ಡಿಕ್ಕಿಯಾಗಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ರೊಬ್ಬರು ಮೃತಪಟ್ಟ ಘಟನೆ ಹಿರಿಯೂರಿನಲ್ಲಿ ನಡೆದಿದೆ ಹೌದು ರಾಷ್ಟ್ರೀಯ ಹೆದ್ದಾರಿ 48ರಲ್ಲಿ ತಾಲ್ಲೂಕಿನ ಕಸ್ತೂರಿ ರಂಗಪ್ಪನ ಹಳ್ಳಿ ಗೇಟ್ ಬಳಿ ಲಾರಿಗೆ ಕಾರು ಡಿಕ್ಕಿ ಹೊಡೆದು ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಚಂದ್ರಶೇಖರ್ (49) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ

ಕಾರಿನಲ್ಲಿ ಚಂದ್ರಶೇಖರ್,ಅವರ ಪತ್ನಿ ಜಯಶೀಲಾ, ಪುತ್ರಿ ಚಂದನಾ ಹಾಗೂ ಪುತ್ರ ಚಿರಾಗ್ ಪ್ರಯಾಣಿಸುತ್ತಿ ದ್ದರು.ಅವಘಡದಲ್ಲಿ ಗಾಯಗೊಂಡ ಮೂವರನ್ನು ಹಿರಿಯೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಿದ ನಂತರ ಚನ್ನಪಟ್ಟಣಕ್ಕೆ ಕಳುಹಿಸಲಾಗಿದೆ.

ಮಗನನ್ನು ವೈದ್ಯಕೀಯ ಕಾಲೇಜಿಗೆ ಬಿಡಲು ಹೊರಟಿದ್ದ ಕುಟುಂಬ ಹೌದು ದಾವಣಗೆರೆಯ ಬಾಪೂಜಿ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್‌ಗೆ ವಾರದ ಹಿಂದೆ ಚಿರಾಗ್‌ನನ್ನು ದಾಖಲು ಮಾಡಲಾಗಿತ್ತು. ಆತನನ್ನು ಕಾಲೇಜಿಗೆ ಬಿಡಲೆಂದು ಪತ್ನಿ, ಪುತ್ರಿ ಜೊತೆಗೆ ಚಂದ್ರಶೇಖರ್ ಹೋಗುವಾಗ ದುರ್ಘಟನೆ ಸಂಭವಿಸಿದೆ ಎಂದು ರಾಮನಗರ ಜಿಲ್ಲಾ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಕೆ.ಸತೀಶ್  ತಿಳಿಸಿದ್ದಾರೆ.

ಇನ್ನೂ ಈ ಒಂದು ಅಪಘಾತದ ಸುದ್ದಿ ಯನ್ನು ತಿಳಿದ ಗ್ರಾಮಾಂತರ ಠಾಣೆ ಇನ್‌ಸ್ಪೆಕ್ಟರ್ ಕಾಳಿಕೃಷ್ಣ ಪ್ರಕರಣ ದಾಖಲು ಮಾಡಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಅಪಘಾತದಲ್ಲಿ ಕಾರು ಸಂಪೂರ್ಣ ಜಖಂಗೊಂಡಿದೆ. ಇನ್ನೂ ಇತ್ತ ಅಪಘಾತದಲ್ಲಿ ಮೃತಪಟ್ಟ ನೌಕರರ ತಾಲ್ಲೂಕು ಅಧ್ಯಕ್ಷ ರಿಗೆ ರಾಜ್ಯದ ಮೂಲೆ ಮೂಲೆ ಗಳಿಂದ ಸರ್ಕಾರಿ ನೌಕರರು ತೀವ್ರವಾದ ಸಂತಾಪ ವನ್ನು ಸೂಚಿಸಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಹಿರಿಯೂರು…..


Google News

 

 

WhatsApp Group Join Now
Telegram Group Join Now
Suddi Sante Desk