ಧಾರವಾಡ ದಲ್ಲಿ ಭೀಕರ ಅಪಘಾತ 3 ಸಾವು 4 ಜನರು ಗಂಭೀರ ಗಾಯ – ಡಿಸೇಲ್ ತುಂಬಿದ ಲಾರಿ ಟಿಪ್ಪರ್ ನಡುವೆ ಅಪಘಾತ…..

Suddi Sante Desk

ಧಾರವಾಡ –

ಧಾರವಾಡ ದಲ್ಲಿ ಮತ್ತೊಂದು ಭೀಕರ ಅಪಘಾತವಾಗಿದೆ ಹೌದು.ಡಿಸೇಲ್ ತುಂಬಿದ ಟ್ಯಾಂಕರ್ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದೆ.ಸ್ಥಳದಲ್ಲೇ ಮೂವರು ಸಾವಿಗೀಡಾಗಿದ್ದು ನಾಲ್ವರು ಗಂಭೀರವಾಗಿ ಗಾಯಗೊಂಡಿ ದ್ದಾರೆ.

ಹೊತ್ತಿ ಉರಿದಿದೆ ಟ್ಯಾಂಕರ್.ಟ್ಯಾಂಕರ್ ನಲ್ಲಿ ಸುಟ್ಟು ಕರಕಲಾಗಿದ್ದಾರೆ ಇಬ್ಬರು ಅಲ್ಲೇ ಸಾವಿಗೀಡಾಗಿದ್ದು ಟಿಪ್ಪರ್ ನಲ್ಲಿ ಒರ್ವ ಸಾವಿಗೀಡಾಗಿದ್ದು ನಾಲ್ವರು ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇನ್ನೂ ಧಾರವಾಡ ಹೊರವಲಯದ ಯರಿಕೊಪ್ಪ‌ ಬೈಪಾಸ್ ಬಳಿ ಈ ಒಂದು ಘಟನೆ ನಡೆದಿದೆ.ರಾಷ್ಟ್ರೀಯ ಹೆದ್ದಾರಿ ನಂ. 4ರ ಬೈಪಾಸ್ ನಲ್ಲಿ ಅಪಘಾತ ಸಂಭವಿಸಿದೆ.ಡಿಸೇಲ್ ಲಾರಿ ಪಲ್ಟಿಯಾದ ಬಳಿಕ ಹೊತ್ತಿಕೊಂಡಿದೆ ಬೆಂಕಿ.ಬೆಂಕಿ ನಂದಿಸಲು ಅಗ್ನಿ ಶಾಮಕ ದಳ ಹರಸಾಹಸವನ್ನು ಪಟ್ಟಿದ್ದು ಕಂಡು ಬಂದಿತು.ಮೂರು ಅಗ್ನಿಶಾಮಕ ವಾಹನಗಳಿಂದ ಬೆಂಕಿ ನಂದಿಸೋ ಕಾರ್ಯ ನಡೆಯಿತು.

ಅಪಘಾತ ಹಿನ್ನೆಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು. ಧಾರವಾಡ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಡೀಸೆಲ್‌ ಲಾರಿ ಬೆಳಗಾವಿ ಯಿಂದ ಹುಬ್ಬಳ್ಳಿ ಕಡೆಗೆ ಕಲ್ಲಿದ್ದಲು ಟಿಪ್ಪರ್ ಹುಬ್ಬಳ್ಳಿ ಕಡೆಯಿಂದ ಬೆಳಗಾವಿ ಕಡೆಗೆ ಹೊರಟಿತ್ತು ಇನ್ನೂ ಅಪಘಾತ ಸ್ಥಳಕ್ಕೆ ಧಾರವಾಡ ಗ್ರಾಮೀಣ ಮತ್ತು ಧಾರವಾಡ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.