ಜಾನುವಾರುಗಳಿಗೆ ಕುಡಿಯಲು ವಿಶೇಷ ನೀರಿನ ತೊಟ್ಟಿ ನಿರ್ಮಾಣ ಗಮನ ಸೆಳೆಯುತ್ತಿವೆ ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ ರಡ್ಡೇರ ಕೆಲಸ ಕಾರ್ಯಗಳು…..

Suddi Sante Desk

ಧಾರವಾಡ –

ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಅಲ್ಲಾಪೂರ ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ ರಡ್ಡೇರ ಮತ್ತೊಂದು ವಿಶೇಷವಾದ ಕಾರ್ಯವನ್ನು ಮಾಡಿ ಈಗ ಎಲ್ಲರ ಗಮನ ಸೆಳೆದಿದ್ದಾರೆ.ಹೌದು ಆಯ್ಕೆಯಾದ ನಂತರ ಈಗಾಗಲೇ ಹತ್ತು ಹಲವಾರು ಕೆಲಸ ಕಾರ್ಯಗಳ ಮೂಲಕ ಮನೆ ಮಾತಾಗಿರುವ ಇವರು ಈಗ ಜಾನುವಾರು ಮತ್ತು ಪಕ್ಷಿಗಳಿಗೆ ಕುಡಿಯಲು ಪ್ರತ್ಯೇಕವಾದ ಕುಡಿಯುವ ನೀರಿನ ತೊಟ್ಟಿಯನ್ನು ಮಾಡಿದ್ದಾರೆ

ಹೌದು ಗ್ರಾಮದಲ್ಲಿ ಜಾನುವಾರುಗಳಿಗೆ ಪ್ರತ್ಯೇಕವಾದ ಕುಡಿಯುವ ನೀರು ತೊಟ್ಟಿ(ಜಾನುವಾರು ಜೀವಜಲ) ವನ್ನು ನಿರ್ಮಾಣ ಮಾಡಿದ್ದಾರೆ.ಇದರಿಂದಾಗಿ ಪ್ರಾಣಿ ಪಕ್ಷಿಗಳಿಗೆ ಬಹಳಷ್ಟು ಉಪಯೋಗ ಆಗಿದೆ

ಹೌದು ಬೇರೆ ಬೇರೆ ಅಭಿವೃದ್ಧಿ ಕೆಲಸಗಳೊಂದಿಗೆ ಗ್ರಾಮದಲ್ಲಿ ನಾಲ್ಕೈದು ತೊಟ್ಟಿಗಳನ್ನು ನಿರ್ಮಾಣ ಮಾಡಿದ್ದು ಇದರಿಂದಾಗಿ ತುಂಬಾ ತುಂಬಾ ಅನುಕೂಲ ಉಪಯೋಗ ಆಗುತ್ತಿದ್ದು ಪ್ರಾಣಿ ಪಕ್ಷಿ ಜಾನುವಾರುಗಳಿಗೆ ಅನುಕೂಲ ಆಗುತ್ತಿದೆ.ಇನ್ನೂ ಇದೆ ರೀತಿ ಪ್ರತಿ ಹಳ್ಳಿಯಲ್ಲೂ ಮಾಡಿದರೆ ಜಾನುವಾರುಗಳಿಗೆ ಪ್ರಾಣಿ ಪಕ್ಷಿಗಳಿಗೆ ಬಹಳಷ್ಟು ಉಪಯೋಗ ಆಗುವುದು ಸಾರ್ವಜನಿಕರ ಹಲವಾರು ಕೆಲಸ ಅಷ್ಟೇ ಅಲ್ಲದೆ ಜಾನುವಾರುಗಳಿಗೆ ಪ್ರಾಣಿ ಪಕ್ಷಿಗಳಿಗೆ ಉಪಯೋಗ ಆಗುವ ಕೆಲಸ ಮಾಡಬೇಕು ಅನ್ನೋ ಉದ್ದೇಶದಿಂದ ಇದನ್ನು ನಿರ್ಮಾಣ ಮಾಡಲಾಗಿದ್ದು ಸಾರ್ವಜನಿಕರು ಇದರ ಸುತ್ತಲೂ ಸ್ವಚ್ಚತೆಯಿಂದ ಇಟ್ಟುಕೊಳ್ಳಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯ ಮಲ್ಲಿಕಾರ್ಜುನ ರಡ್ಡೇರ ಹೇಳುತ್ತಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.