This is the title of the web page
This is the title of the web page

Live Stream

[ytplayer id=’1198′]

April 2024
T F S S M T W
 123
45678910
11121314151617
18192021222324
252627282930  

| Latest Version 8.0.1 |

State News

ಶಾಲಾ ಆರಂಭದ ಬೆನ್ನಲ್ಲೇ ಸರ್ಕಾರಕ್ಕೆ ಶಾಕ್ ಕೊಡಲು ಮುಂದಾದ ಶಿಕ್ಷಕರು – ಸಂಘಟನೆ ಯ ನಿರ್ಧಾರಕ್ಕೆ ಶಿಕ್ಷಕರಿಂದ ಪರ ವಿರೋಧ…..

WhatsApp Group Join Now
Telegram Group Join Now

ಬೆಂಗಳೂರು –

ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ಶಿಕ್ಷಕರ ಪರವಾಗಿ KSPSTA ಸಂಘಟನೆ ಕಪ್ಪು ಪಟ್ಟಿ ಚಳುವಳಿಗೆ ಕರೆ ನೀಡಿದೆ.ಹೌದು ಈಗಾಗಲೇ ಮೊದಲನೆಯ ಹಂತದಲ್ಲಿ ತರಬೇತಿ ಬಹಿಷ್ಕಾರ ಕ್ಕೆ ಕರೆ ಕೊಟ್ಟಿರುವ ಸಂಘಟನೆ ಈಗ ಎರಡನೇಯ ಹಂತದಲ್ಲಿ ಕಪ್ಪು ಪಟ್ಟಿ ಚಳುವಳಿಗೆ ಕರೆ ಕೊಟ್ಟಿದೆ.

ಹೌದು ರಾಜ್ಯದಲ್ಲಿ ಅಕ್ಟೋಬರ್ 25 ರಿಂದ 1 ರಿಂದ 5ನೇ ತರಗತಿಗಳು ಆರಂಭವಾಗಲಿದ್ದು ಹೀಗಾಗಿ ಶಾಲೆ ಆರಂಭದ ನಿರ್ಧಾರ ಪ್ರಕಟವಾದ ಬೆನ್ನಲ್ಲೇ ಈಗ ಶಿಕ್ಷಕರು ಕೆಲ ಬೇಡಿಕೆ ಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕೆ ಕರೆ ಕೊಟ್ಟಿದ್ದಾ ರೆ.ಶಿಕ್ಷಕರ ವರ್ಗಾವಣೆ ಸೇರಿದಂತೆ ಹಲವು ಬೇಡಿಕೆ ಗಳನ್ನು ಮುಂದಿಟ್ಟುಕೊಂಡು ಶಾಲಾ ಆರಂಭದ ಹೊತ್ತಿನಲ್ಲಿ ರಾಜ್ಯ ದಲ್ಲಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಒಂದು ಶಿಕ್ಷಕರ ಸಂಘಟನೆ ಯವರು ಕಪ್ಪು ಪಟ್ಟಿ ಧರಿಸಿ, ಶಿಕ್ಷಕರು ಶಾಲೆಗೆ ಬರೋದಕ್ಕೆ ನಿರ್ಧರಿಸಿದ್ದಕ್ಕೆ ಕರೆ ಕೊಟ್ಟಿದ್ದಾರೆ

ಇನ್ನೂ ಇತ್ತ ಗ್ರಾಮೀಣ ಶಿಕ್ಷಕರ ಸಂಘದವರು ಒಂದು ವಾರಗಳ ಕಾಲ ಗಡುವು ನೀಡಿ ಆಮರಣಾಂತ ಉಪವಾಸ ಸತ್ಯಾಗ್ರಹಕ್ಕೆ ಕರೆ ಕೊಟ್ಟಿದ್ದಾರೆ.ಈ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರತಿಭಟನೆಯ ಬಿಸಿ ಮುಟ್ಟಿಸಲು ನಿರ್ಧರಿಸಿದ್ದಾರೆ.

ಈ ಕುರಿತಂತೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮತ್ತು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದವರು ಪತ್ರಿಕಾ ಪ್ರಕಟಣೆ ಕೂಡ ಹೊರಡಿಸಿದ್ದಾರೆ ತರಗತಿ ಬಹಿಷ್ಕಾರದ ಜೊತೆಗೆ,ನಮ್ಮ ಹೋರಾಟ ಬೇಡಿಕೆ ಈಡೇರಿಸೋವರೆಗೆ ಮುಂದುವರೆಯಲಿದೆ.ನಾವು ಮಕ್ಕಳೊಂದಿಗೆ ಇದ್ದು,ನಮ್ಮ ಬೇಡಿಕೆಗಾಗಿ ನಿರಂತರ ಹೋರಾಟದಲ್ಲಿದ್ದೇವೆ.ಈಗಾಗಲೇ ನಮ್ಮ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವಂತ ಹೋರಾಟ 15 ನೇ ದಿನಕ್ಕೆ ಕಾಲಿಟ್ಟಿದ್ದು,ಅಕ್ಟೋಬರ್ 21ರಿಂದ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆಗೆ ಇಳಿಯೋದಾಗಿ ತಿಳಿಸಿದೆ.ಕಪ್ಪು ಪಟ್ಟಿ ಧರಿಸಿ, ಶೈಕ್ಷಣಿಕ ಚಟುವಟಿಕೆ ನಿರ್ವಹಣಾ ಚಳುವಳಿ ನಡೆಸಲಿದ್ದೇವೆ ಎಂದು ತಿಳಿಸಿದ್ದು ಇದೆಲ್ಲದರ ನಡುವೆ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕು


Google News

 

 

WhatsApp Group Join Now
Telegram Group Join Now
Suddi Sante Desk