This is the title of the web page
This is the title of the web page

Live Stream

[ytplayer id=’1198′]

November 2025
T F S S M T W
 12345
6789101112
13141516171819
20212223242526
27282930  

| Latest Version 8.0.1 |

Local News

ಧಾರವಾಡದ ಹೆಬ್ಬಳ್ಳಿ ಗ್ರಾಮದಲ್ಲಿ ಶಿಕ್ಷಕರ ದಿನಾಚರಣೆ ಹೇಗಿತ್ತು ಗೊತ್ತಾ – ಮಾದರಿಯಾದ ಗ್ರಾಮಸ್ಥರು…..

WhatsApp Group Join Now
Telegram Group Join Now

ಧಾರವಾಡ –

ಶಿಕ್ಷಕರ ದಿನಾಚರಣೆ ಶಾಲೆಯ ಎಲ್ಲಾ ಶಿಕ್ಷಕರನ್ನು ಸತ್ಕರಿಸಿ ಮಾದರಿಯಾದ ಹೆಬ್ಬಳ್ಳಿಯ ಗ್ರಾಮಸ್ಥರು. ಶಿಕ್ಷಕರ ದಿನವನ್ನು ಶಿಕ್ಷಕರ ದಿನೋತ್ಸವವನ್ನು ಶಿಕ್ಷಕರೇ ಆಚರಿಸಿಕೊಳ್ಳಬಾರದು ಶಿಕ್ಷಕರಿಗೆ ಗೌರವಿಸುವ ಹೊಸ ಸಂಪ್ರದಾಯವನ್ನು ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದ ಸರಕಾರಿ ಮಾದರಿ ಕನ್ನಡ ಹೆಣ್ಣು ಮಕ್ಕಳ ಶಾಲೆಯಲ್ಲಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನದ ಅಂಗವಾಗಿ ಶಿಕ್ಷಕರ ದಿನಾಚರಣೆಯನ್ನು ಆಚರಿಸುವುದರ ಮೂಲಕ ಶಾಲೆಯ ಎಲ್ಲ ಗುರು ಮತ್ತು ಗುರುಮಾತೆಯರನ್ನು ಸನ್ಮಾನ ಮಾಡುವುದರ ಮೂಲಕ ಈ ಒಂದು ಮಹತ್ವದ ದಿನವನ್ನು ಅರ್ಥಪೂರ್ಣವಾಗಿ ಆಚರಿಸು ವುದರ ಮೂಲಕ,ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮದ ಪ್ರಾರ್ಥನೆ ಗೀತೆಯನ್ನು ಎಸ್ ಡಿ ಎಂ ಸಿ ಸದಸ್ಯನಿಯರಾದ ಶ್ರೀಮತಿ ಮಂಜುಳಾ ಪಲ್ಲೇದ,ಹಾಗೂ ಶ್ರೀಮತಿ ನಿರ್ಮಲಾ ಮಿಂಡೆನವರ ರವರ ನೇರವೇರಿಸಿಕೊಟ್ಟರು.ಹಾಗೂ ಸ್ವಾಗತ ಭಾಷಣವನ್ನು ಶ್ರೀಮತಿ ಯಶೋಧ ನಾಯ್ಕರ್ ರವರು ಮಾಡಿದರು ಮತ್ತು ಉಪಾಧ್ಯಕ್ಷರಾದ ಶ್ರೀಮತಿ ಕವಿತಾ ಅಣ್ಣಿಗೇರಿ ರವರು ಪುಷ್ಪಾರ್ಚನೆ ಕಾರ್ಯಕ್ರಮ ನಡೆಸಿಕೊಟ್ಟರು.ನಂತರ ಶಾಲೆಯ ಪ್ರಧಾನ ಗುರುಗಳಾದ ರಮೇಶ ಕಾಂಬಳೆ ಪ್ರಾಸ್ತಾವಿ ಕವಾಗಿ ಮಾತನಾಡಿದರು ಹಾಗೂ ಸಹ ಶಿಕ್ಷಕಿಯ ರಾದ ಶ್ರೀಮತಿ ವ್ಹಿ ವ್ಹಿ ಕಟ್ಟಿ ,ಹಾಗೂ ಶ್ರೀಮತಿ ಎಸ್ ವಾಯ್ ವಾಬಣ್ಣವರ, ಶ್ರೀಮತಿ ಕಂದಗಲ್ ರವರು ಶಿಕ್ಷಕರ ದಿನಾಚರಣೆಯ ಕುರಿತು ಮಾತನಾಡಿದರು.

ಮತ್ತು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶಿಕ್ಷಣ ಪ್ರೇಮಿಗಳಾದ ಶ್ರೀ ಪ್ರಕಾಶ್ ಕುಂಬಾರ ಮಾತನಾಡಿ ಶಿಕ್ಷಕರು ಈ ಸಮಾಜವನ್ನು ತಿದ್ದುವ ಶಿಲ್ಪಿಗಳು ಅಜ್ಞಾನ ಎಂಬ ಕತ್ತಲೆಯನ್ನು ಹೊಡೆದೋಡಿಸಿ ಸುಜ್ಞಾನವೆಂಬ ಬೆಳಕನ್ನು ಮೂಡಿಸಿ ಮಕ್ಕಳಿಗೆ ಅಕ್ಷರದ ಬೆಳಕನ್ನು ನೀಡುವ ಮಹಾನ್ ಚೇತನ ನಮ್ಮ ಗುರುಗಳು ಗುರುಮಾತೆಯರಾಗಿದ್ದು, ಇವರನ್ನು ಕೇವಲ ಶಿಕ್ಷಕರ ದಿನದ ಒಂದು ದಿನ ಮಾತ್ರ ಗೌರವಿಸದೇ ನಿತ್ಯ ಅವರನ್ನು ಗೌರವಿಸುವಂ ತಾಗಬೇಕು ಎಂದರು, ಶಿಕ್ಷಕ ಶಿವಾನಂದ ಹೂಗಾರ. ಶಿಕ್ಷಕರ ದಿನಾಚರಣೆಯ ಕುರಿತು ಮಾತನಾಡುತ್ತಾ ಪೋಷಕರ ಹಾಗೂ ಶಿಕ್ಷಕರ ಮತ್ತು ಸಮಾಜದ ಪ್ರತಿಯೊಬ್ಬ ನಾಗರಿಕರಿಗೂ ಕೂಡ ಶಿಕ್ಷಣದ ಅರಿವು ಅವಶ್ಯ ಮತ್ತು ಶಿಕ್ಷಕರನ್ನು ಗೌರವಿಸುವುದು ಮುಂದುವರಿಯಲಿ ಇದರಿಂದ ಮಕ್ಕಳ,ರಾಷ್ಟ್ರದ ಅಭಿವೃದ್ಧಿ ಆಗುವುದು ಖಚಿತ ಎಂದು ಅಭಿಪ್ರಾಯ ಪಟ್ಟರು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷರಾದ ಸುರೇಶ ಅಂಬಿಗೇರ ರವರು ಸಭೆಯ ಅಧ್ಯಕ್ಷತೆ ಯನ್ನು ವಹಿಸಿದ್ದರು.ಎಸ್ ಡಿ ಎಂ ಸಿ ಸದಸ್ಯರಾದ ಚಂದ್ರಶೇಖರ ಮಟ್ಟಿ ಅವರು ಕಾರ್ಯಕ್ರಮದ ನಿರೂಪಣೆ ಮಾಡಿದರು.ಮತ್ತು ಸದಸ್ಯರಾದ ಬಾಳಪ್ಪ ತುಳಜಪ್ಪನವರ ಗುರುವಿನ ಕುರಿತು ಹಾಡು ಹಾಡಿದರು. ನಂತರ ಈ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಸದಸ್ಯರಾದ ವಾಸುದೇವ ಮಂಗೋಡಿ. ಮೇಹ ಬೂಬ್ ಸವಣೂರ ರಮೇಶ ಬಡಿಗೇರ ಅಶೋಕ ಹಡಪದ ಗಂಗಯ್ಯ ಕಲ್ಮಠ, ಮತ್ತು ಸದಸ್ಯನಿ ಯರಾದ ಶ್ರೀಮತಿ ಸರೋಜಾ ಮುತ್ತಣ್ಣವರ, ಶ್ರೀಮತಿ ಮಕ್ತುಂಬಿ ಟಕ್ಕೆದ, ಶ್ರೀಮತಿ ಶಶಿಕಲಾ ಚನ್ನದಾಸರ, ಉಪಸ್ಥಿತರಿದ್ದರು. ಕಾರ್ಯಕ್ರಮ ದ ವಂದನಾರ್ಪಣೆಯನ್ನು ಶ್ರೀಮತಿ ರೇಣುಕಾ ಮುಳ್ಳೂರ ರವರು ನೇರವೇರಿಸಿಕೊಟ್ಟರು.


Google News

 

 

WhatsApp Group Join Now
Telegram Group Join Now
Suddi Sante Desk