ಬಳ್ಳಾರಿ –
ರಾಜಕೀಯ ಬದ್ಧ ವೈರಿಗಳಾದರೂ ಕೂಡಾ ಸ್ನೇಹ ಪ್ರೀತಿ ಇರುತ್ತದೆ ಎಂಬೊದಕ್ಕೆ ಬಳ್ಳಾರಿ ಸಾಕ್ಷಿಯಾ ಗಿದೆ.ಹೌದು ಒಬ್ಬರು ಕಾಂಗ್ರೆಸ್ ಪಕ್ಷದ ಮಾಜಿ ಸಚಿವರು ಮತ್ತೊಬ್ಬರು ಸಧ್ಯ ರಾಜ್ಯ ಸರ್ಕಾರ ದಲ್ಲಿ ಸಚಿವ ಸಂಪುಟದಲ್ಲಿ ಸಚಿವರಾಗಿದ್ದಾರೆ ಶ್ರೀರಾಮಲು.ಪಕ್ಷ ಬೇರೆ ಬೇರೆಯಾದರೂ ಕೂಡಾ ಅದನ್ನೇಲ್ಲವನ್ನು ಮರೆತು ಇಂದು ಹೊಸದೊಂದು ದಾಖಲೆ ಬರೆದಿದ್ದಾರೆ.
ಹೌದು ಅವರ ಪ್ರೀತಿ ನೋಡಿದ್ರೇ ಕಾರ್ಯಕರ್ತರು ಹೌಹಾರೋದು ಗ್ಯಾರಂಟಿ. ನಾವು ಆಗಾಗ ಇದನ್ನು ಹೇಳುತ್ತಿರುತ್ತೇವೆ.ರಾಜಕಾರಣಿಗಳು ಬೇರೆ ಬೇರೆ ಪಕ್ಷಗಳನ್ನು ಪ್ರತಿನಿಧಿಸಿದರೂ ಅವರ ನಡುವೆ ಸ್ನೇಹವಿರುತ್ತದೆ ಎಂಬೊದನ್ನು ಈ ಇಬ್ಬರು ನಾಯಕರು ಸಾಬೀತು ಮಾಡಿದ್ದಾರೆ.
ರಾಜಕೀಯ ವಾಗಿ ಬದ್ಧ ವೈರಿಗಳಾದರೂ ಅವರ ನಡುವೆ ನಮ್ಮಲ್ಲಿ ಸೋಜಿಗ ಹುಟ್ಟುವಷ್ಟು ಆತ್ಮೀಯತೆ ಇದೆ ಎಂಬೊದನ್ನು ಕಾಂಗ್ರೆಸ್ ಪಕ್ಷದ ಮಾಜಿ ಸಚಿವ ಸಂತೋಷ್ ಲಾಡ್ ಮತ್ತು ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ನ ಸಾರಿಗೆ ಸಚಿವರಾಗಿರುವ ಬಿ.ಶ್ರೀರಾಮುಲು ನಡುವೆಯೂ ಗಾಢವಾದ ಸ್ನೇಹವಿದೆ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನಲ್ಲಿರುವ ಬನ್ನಿಹಟ್ಟಿ ಜಾತ್ರೆಯಲ್ಲಿ ಇವರಿಬ್ಬರು ಬಹಳ ದಿನಗಳ ನಂತರ ಭೇಟಿಯಾಗಿದ್ದಾರೆ.ಪರಸ್ಪರ ಎದುರಾದಾಗ ಆತ್ಮೀಯತೆಯಿಂದ ಆಲಂಗಿಸಿ ಕೊಂಡು ಹರ್ಷ ವ್ಯಕ್ತಪಡಿಸುತ್ತಾ ಯೋಗಕ್ಷೇಮ ವಿಚಾರಿಸಿಕೊಂಡಿದ್ದಾರೆ ಇದರೊಂದಿಗೆ ಈ ಇಬ್ಬರು ನಾಯಕರು ಹೊಸದೊಂದು ಸಂದೇಶವನ್ನು ನೀಡಿ ಬರೆದಿದ್ದಾರೆ.
ಸುದ್ದಿ ಸಂತೆ ನ್ಯೂಸ್ ಬಳ್ಳಾರಿ……