ಬಳ್ಳಾರಿ –
ಮೆಂಥೋಪ್ಲಸ್ ಚಿಕ್ಕ ಡಬ್ಬಿ ನುಂಗಿ ಮಗು ಸಾವಿ ಗೀಡಾದ ಘಟನೆ ಬಳ್ಳಾರಿ ಯಲ್ಲಿ ನಡೆದಿದೆ. ಜಿಲ್ಲೆಯ ಕಂಪ್ಲಿ ಪಟ್ಟಣದ 5ನೇ ವಾರ್ಡ್ ಇಂದಿರಾನಗರದಲ್ಲಿ ಈ ಒಂದು ಘಟನೆ ನಡೆದಿದೆ
ಮುತ್ಯಾಲ ರಾಘವೇಂದ್ರ ಮತ್ತು ತುಳಸಿ ದಂಪತಿ ಏಕೈಕ ಪುತ್ರಿ ಪ್ರಿಯದರ್ಶಿನಿ(9ತಿಂಗಳು) ಮಗು ಸಾವಿಗೀಡಾದ ಮಗುವಾಗಿದೆ.ಆಟವಾಡುತ್ತಿದ್ದಾಗ ಮೆಂಥೋಪ್ಲಸ್ ಚಿಕ್ಕ ಡಬ್ಬಿಯನ್ನು ನುಂಗಿದೆ ಮಗು.
ಮಗುವಿಗೆ ಉಸಿರಾಟ ತೊಂದರೆ ಹೆಚ್ಚಿದಾಗ ಖಾಸಗಿ ವೈದ್ಯರ ಬಳಿ ಹೋಗಿದ್ದಾರೆ ಪೋಷಕರು. ವೈದ್ಯರು ಪರೀಕ್ಷಿಸಿದಾಗ ಮಗು ಮಾರ್ಗ ಮಧ್ಯೆಯೇ ಮೃತಪಟ್ಟಿದೆ.ಈ ದಂಪತಿಗೆ ವಿವಾಹವಾಗಿ 10ವರ್ಷಗಳ ನಂತರ ಈ ಮಗು ಜನಿಸಿದ್ದ ಮಗು.
ಸುದ್ದಿ ಸಂತೆ ನ್ಯೂಸ್ ಬಳ್ಳಾರಿ…..