ಪಾಟ್ನಾ –
ಸದನಕ್ಕೆ ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಶಾಸಕರನ್ನು ಸದನದಿಂದ ಎತ್ತಿ ಹೋರ ಹಾಕಿದ ಘಟನೆ ಬಿಹಾರ ದಲ್ಲಿ ನಡೆದಿದೆ.ಹೌದು ರಾಜ್ಯ ವಿಧಾನಸಭೆಯಲ್ಲಿ ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸ್ವಾದಿ-ಲೆನಿನಿಸ್ಟ್ (ಸಿಪಿಐ-ಎಂಎಲ್) ಶಾಸಕರು ಭಾರಿ ಗದ್ದಲವನ್ನೇ ಸೃಷ್ಟಿಸಿ ದ್ದಾರೆ.ಈ ವೇಳೆ ಶಾಸಕರನ್ನು ಎತ್ತಿ ಹಿಡಿದು ಮಾರ್ಷಲ್ಗಳು ಹೊರಗೆ ಹಾಕಿದ್ದಾರೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಕುರಿತು ಹಲವು ಶಾಸಕರು ಸದನಕ್ಕೆ ಅಡ್ಡಿಪ ಡಿಸಿದ ಹಿನ್ನೆಲೆಯಲ್ಲಿ ನಾಯಕರನ್ನು ಹೊರಗೆ ಕರೆದು ಕೊಂಡು ಹೋಗುವಂತೆ ವಿಧಾನಸಭೆ ಭದ್ರತಾ ಸಿಬ್ಬಂದಿಗೆ ಸೂಚಿಸಲಾಯಿತು.ಈ ವೇಳೆ ಒಟ್ಟು ಎಂಟು ಶಾಸಕರನ್ನು ಮಾರ್ಷಲ್ಗಳು ಸದನದಿಂದ ಹೊರಗೆ ಕರೆದೊಯ್ದಿದ್ದಾರೆ.

ಕನಿಷ್ಠ ಆರು ಮಾರ್ಷಲ್ಗಳು ಶಾಸಕರನ್ನು ಅವರ ಕಾಲು ಗಳು,ತೋಳುಗಳನ್ನು ಹಿಡಿದುಕೊಂಡು ಹೊರಗಡೆ ಎಳೆ ದೊಯ್ದಿದ್ದಾರೆ.ಒಬ್ಬೊಬ್ಬ ಶಾಸಕರನ್ನೇ ಎತ್ತಿ ಹೊರಗೆ ಹಾಕಿ ದ್ದಾರೆ. ಮಹಿಳೆಯರ ಮೇಲೆ ಸರಣಿ ಕೊಲೆಗಳು ಮತ್ತು ದೌರ್ಜನ್ಯಗಳು ನಡೆಯುತ್ತಿವೆ. ಹಿಂದೂ-ಮುಸ್ಲಿಂ ಎಂಬ ಭಿನ್ನಾಭಿಪ್ರಾಯ ಸೃಷ್ಟಿಸುವ ಮೂಲಕ ಉದ್ವಿಗ್ನತೆಯನ್ನು ಹೆಚ್ಚಿಸುವ ಪ್ರಯತ್ನಗಳು ನಡೆಯುತ್ತಿವೆ.ನಾವು ಅದರ ಬಗ್ಗೆ ಚರ್ಚೆ ಬಯಸಿದ್ದೇವೆ.ಆದರೆ ಈ ಸರ್ಕಾರ ಚರ್ಚೆಗೆ ಸಿದ್ಧರಿ ರಲಿಲ್ಲ.ಮಾರ್ಷಲ್ಗಳ ಸಹಾಯದಿಂದ ನಮ್ಮನ್ನು ಹೊರ ಹಾಕಿದ್ದಾರೆ ಎಂದು ಸಿಪಿಐ(ಎಂ-ಎಲ್) ಶಾಸಕ ಬೀರೇಂದ್ರ ಪ್ರಸಾದ್ ಗುಪ್ತಾ ಆಕ್ರೋಶ ಹೊರಹಾಕಿದ್ದಾರೆ.