ಆಂಕರ್ –
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ರಾತ್ರಿವೇಳೆ ಕಿಡಿಗೇಡಿಗಳ ಪುಂಡಾಟ ಹೆಚ್ಚಾಗಿದೆ. ಪ್ರತಿದಿನ ಒಂದಿಲ್ಲೊಂದು ಒಂದು ಘಟನೆಗಳು ನಡೆಯುತ್ತಿದ್ದು ಇದಕ್ಕೆ ನಗರದಲ್ಲಿ ಕಂಡು ಬಂದ ಮತ್ತೊಂದು ಘಟನೆ ಸಾಕ್ಷಿಯಾಗಿದೆ.ಇಟ್ಟಿಗೆಯಿಂದ ನಿಂತಿದ್ದ ವಾಹನದ ಗ್ಲಾಸ್ ಜಖಂ ಮಾಡಿದ ಘಟನೆ ಹುಬ್ಬಳ್ಳಿಯ ಗೋಕುಲ ರಸ್ತೆಯ ಖಾಸಗಿ ಹೋಟೆಲ್ ಮುಂದೆ ನಡೆದಿದೆ.

ಹೌದು ನಿಂತಿದ್ದ ಟಾಟಾ ಏಸ್ ವಾಹನವನ್ನು ರಾತ್ರಿ ವೇಳೆ ಗ್ಲಾಸ್ ಜಖಂಗೊಳಿಸಿ ಬಂಪರ್ ಕಿತ್ತುಹಾಕಿದ ಕಿಡಿಗೇಡಿಗಳು ದರ್ಪ ಮೆರೆದಿದ್ದಾರೆ.ಇನ್ನೂ ಮಹೇಂದ್ರ ಕಲಾಲ ಎನ್ನುವವರಿಗೆ ಸೇರಿದ ಈ ಒಂದು ಟಾಟಾ ಏಸ್ ಇದಾಗಿದ್ದು ಗೋಕುಲ ರೋಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಸಧ್ಯ ಈ ಕುರಿತಂತೆ ಪೊಲೀಸರು ಪರಿಶೀಲನೆ ಮಾಡ್ತಾ ಇದ್ದಾರೆ.