ಸರ್ಕಾರದ ಅಧಿಕೃತ ನಿವಾಸ ತೊರೆದ CM – ಕುತೂಹಲ ಕೆರಳಿಸುತ್ತಿದೆ ಮಹಾ ಸರ್ಕಾರದ ಚಿತ್ರಣ…..

Suddi Sante Desk

ಪುಣೆ –

ಉದ್ಧವ್ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆ ಮತ್ತು ಆಡಳಿತಾರೂಢ ಮೈತ್ರಿ ಕೂಟ ಎಂವಿಎ ಅಗತ್ಯವಿದ್ದರೆ ವಿಧಾನಸಭೆಯಲ್ಲಿ ಬಹು ಮತವನ್ನು ಸಾಬೀತುಪಡಿಸಲಿದೆ.ಇದೆಲ್ಲದರ ನಡುವೆ ಸಿಎಂ ಉದ್ಧವ್ ಠಾಕ್ರೆಯವರು ಸಿಎಂ ಅಧಿಕೃತ ನಿವಾಸ ತೊರೆ ದಿದ್ದಾರೆ ಹೌದು ಖಾಸಗಿ ನಿವಾಸ ಮಾತೋಶ್ರೀಗೆ ಶಿಫ್ಟ್ ಆಗಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ರಾವತ್ ಠಾಕ್ರೆ ದಕ್ಷಿಣ ಮುಂಬೈನ ಸಿಎಂ ಅಧಿಕೃತ ನಿವಾಸ ವರ್ಷಾವನ್ನು ತೊರೆದು ಉಪನಗರ ಬಾಂದ್ರಾದಲ್ಲಿರುವ ತಮ್ಮ ಖಾಸಗಿ ನಿವಾಸ ಮಾತೋಶ್ರೀ’ಗೆ ಹಿಂತಿರುಗಿದ್ದಾರೆ ಠಾಕ್ರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿಲ್ಲ ಎಂದು ಸ್ಪಷ್ಟಪಡಿಸಿದರುಇದಕ್ಕೂ ಮುನ್ನಾ ಫೇಸ್ ಬುಕ್ ಲೈವ್ ನಲ್ಲಿ ಮಾತನಾಡಿದ ಮಹಾ ಸಿಎಂ ಉದ್ಧವ್ ಠಾಕ್ರೆಯವರು ನೀವು ಎಲ್ಲೋ ಕುಳಿತು ನಾನು ಸರಿಯಿಲ್ಲ ಎಂಬುದನ್ನು ಒಪ್ಪುವುದಿಲ್ಲ.ನನ್ನಮುಂದೆ ಬನ್ನಿ ಎಲ್ಲರೂ ಒಟ್ಟಾಗಿ ಹೋಗಿ ರಾಜ್ಯಪಾಲರಿಗೆ ರಾಜೀ ನಾಮೆ ನೀಡೋಣ.ನಾನು ಅನಿರೀಕ್ಷಿತವಾಗಿ ಸಿಎಂ ಆದಂತ ವನಾಗಿದ್ದೇನೆ.ಯಾವುದೇ ಹುದ್ದೆ ಶಾಶ್ವತವಲ್ಲ.ನನಗೆ ಶಿವಸೇನೆ ಸಂಘಟನೆ ಮುಖ್ಯವಾಗಿದೆ.ನಿಮ್ಮ ಕಾರ್ಯ ವೈಖರಿ ಸರಿಯಿಲ್ಲವೆಂದ್ರೇ ರಾಜೀನಾಮೆ ನೀಡಲು ಸಿದ್ಧನಿ ದ್ದೇನೆ ಎಂಬುದಾಗಿ ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.