ಅನುಮಾನ ಹುಟ್ಟು ಹಾಕಿದ ಮಹಿಳೆಯ ಸಾವು ತನಿಖೆ ಕೈಗೊಂಡ ಪೊಲೀಸರು…..

Suddi Sante Desk
ಅನುಮಾನ ಹುಟ್ಟು ಹಾಕಿದ ಮಹಿಳೆಯ ಸಾವು ತನಿಖೆ ಕೈಗೊಂಡ ಪೊಲೀಸರು…..

ಮಂಡ್ಯ

ಅನುಮಾನಸ್ಪದ ಸ್ಥಿತಿಯಲ್ಲಿ ಅಂಗವಿಕಲ ಮಹಿಳೆಯ ಶವ ಪತ್ತೆಯಾದ ಘಟನೆ ಮಂಡ್ಯ ದಲ್ಲಿ ನಡೆದಿದೆ.ನಿಡಘಟ್ಟ ಗೇಟ್ ಬಳಿ ಈ ಒಂದು ಘಟನೆ ನಡೆದಿದೆ.ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ ನಿಡಘಟ್ಟ ಗೇಟ್ ನಲ್ಲಿ ಮಳವಳ್ಳಿ ತಾಲೂಕಿನ ಕ್ಯಾತೇಗೌಡನ ದೊಡ್ಡಿ ನಿವಾಸಿ ಪೂಜಾಬಾಯಿ(27) ಮೃತ ಮಹಿಳೆಯಾಗಿದ್ದಾಳೆ

ನಿನ್ನೆ ಗಂಡನ ಮನೆಗೆ ಹೋಗಿ ಬರುವುದಾಗಿ ಮನೆಯಿಂದ ಹೋಗಿದ್ದ ಮಹಿಳೆ.ಇಂದು ಕಾಂತರಾಜು ಎಂಬುವರ ಜಮೀನಿನಲ್ಲಿ ಅಂಗ ವಿಕಲ ಮಹಿಳೆ ಶವವಾಗಿ ಪತ್ತೆಯಾಗಿದ್ದಾಳೆ. ಹಲವು ಅನುಮಾನಗಳಿಗೆ ಕಾರಣವಾದ ಮಹಿಳೆಯ ನಿಗೂಢ ಸಾವು ಸ್ಥಳಕ್ಕೆ ಮಳವಳ್ಳಿ ಗ್ರಾಮಾಂತರ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿರುವ ಮಳವಳ್ಳಿ ಗ್ರಾಮಾಂತರ ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

ಸುದ್ದಿ ಸಂತೆ ನ್ಯೂಸ್ ಮಂಡ್ಯ…..

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.