ಗರಗ ನಲ್ಲಿ ರಸ್ತೆ ಮಧ್ಯದಲ್ಲಿಯೇ ಗಣಪತಿ ಬಿಟ್ಟು ತೆರಳಿದ ಯುವಕರು – ಯಾರು ಕೇಳುತ್ತಿಲ್ಲ ಸಮಸ್ಯೆ…..

Suddi Sante Desk

ಧಾರವಾಡ –

ಧಾರವಾಡ ದ ಗರಗ ಗ್ರಾಮದಲ್ಲಿ ಏಳು ದಿನಗಳ ಗಣೇಶೋತ್ಸವ ವಿಸರ್ಜನೆಯ ಸಮಯದಲ್ಲಿ ಸಾಂಗವಾಗಿ ನಡೆಯುತ್ತಿದ್ದ ಮೆರವಣಿಗೆ ಅರ್ಧಕ್ಕೆ ನಿಂತುಕೊಂಡಿದೆ. ವಿಸರ್ಜನೆ ಮಾಡಲು ಮೆರವಣಿಗೆ ಆರಂಭ ಮಾಡಿದರು ಅವರು ಇವರು ಹೇಳಿದ್ದಾರೆ ಎಂದುಕೊಂಡು ಧೈರ್ಯ ದಿಂದ ಯುವಕರು ಜೈ ಗಣೇಶ ಗಣಪತಿ ಬಪ್ಪಾ ಮೊರಯ್ಯಾ ಎನ್ನುತ್ತಾ ಮೆರವಣಿಗೆ ಆರಂಭ ಮಾಡಿದರು ಬಸ್ ನಿಲ್ದಾಣ ಬಳಿ ಮೆರವಣಿಗೆ ಬರುತ್ತಿದ್ದಂತೆ ಪೊಲೀಸರು ತಕರಾರು ಮಾಡಿ ಲಾಠಿ ಚಾರ್ಜ್ ಮಾಡಿದ್ದಾರಂತೆ ಹೀಗಾಗಿ ಅಸಮಾಧಾನಗೊಂಡ ಯುವಕರು ಗಣಪತಿ ಯನ್ನು ನಡು ರಸ್ತೆಯಲ್ಲಿ ಬಿಟ್ಟು ಹೋದರು

ಯಾರನ್ನು ಕೇಳಬೇಕು ಯಾರಿಗೆ ಹೇಳಿದರು ಹೌದಾ ಹೋಗಲಿ ಬಿಡಿ ಮಾಡಲಿ ಎಂಬ ಮಾತುಗಳು ಎಲ್ಲರಿಂದಲೂ ಕೇಳಿ ಬಂದವು.ಹೀಗಾಗಿ ಬೇಸತ್ತ ಯುವಕರು ಮೆರವಣಿಗೆ ಯನ್ನು ಬಿಟ್ಟು ಮೂರು ಗಣಪತಿ ಗಳನ್ನು ನಡು ರಸ್ತೆಯಲ್ಲಿಯೇ ಬಿಟ್ಟು ಮನೆಯತ್ತ ತೆರಳಿದರು

ಅವರು ಇವರನ್ನು ನಂಬಿಕೊಂಡು ಗಣೇಶೋತ್ಸವ ಮಾಡುತ್ತಿರುವ ಯುವಕರಿಗೆ ಮೆರವಣಿಗೆ ಸಮಯದಲ್ಲಿ ಪೊಲೀಸರಿಂದ ಹೀಗೆ ಆಗಿದ್ದು ಯಾಕೇ ಎನು ಅಂತಾ ಕೇಳೊರು ಯಾರು ಅವರಿಗೆ ಹೇಳುವವರು ಯಾರು ಹೇಳಿದರು ಹೇಳಿದವರ ತಪ್ಪು ಎಂಬಂತೆ ಪರಿಸ್ಥಿತಿ ಕಂಡು ಬಂದಿದ್ದು ಸಧ್ಯ ಅರ್ಧಕ್ಕೆ ನಡು ರಸ್ತೆಯಲ್ಲಿ ಗಣಪತಿ ಗಳು ನಿಂತು ಕೊಂಡಿದ್ದು ಮುಂದೇನು ಎಂಬ ಪ್ರಶ್ನೆ ಕಾಡುತ್ತಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.