ಶಿಕ್ಷಕರ ಬೆಂಬಲಕ್ಕೆ ನಿಂತ ನೆಟ್ಟಿಗರು ಸಂಘಟನೆ ನಾಯಕರ ಮೌನ ಅಸಮಾಧಾನ ತೋಡಿ ಕೊಂಡ ಶಿಕ್ಷಕರಿಗೆ ನಾವಿದ್ದೇವೆ ಎಂದರು ಸಾರ್ವಜನಿಕರು…..

Suddi Sante Desk

ಬೆಂಗಳೂರು –

ಸರ್ಕಾರಿ ಶಾಲೆ ವಿಲೀನದ ಬಗ್ಗೆ ವಾಟ್ಸಾಪ್‌ ಸ್ಟೇಟಸ್‌ ಹಾಕಿದ್ದ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನಿಡಗುಂದಿ ಯ ಅಂಬೇಡ್ಕರ್ ನಗರದ ಸರ್ಕಾರಿ ಶಾಲೆಯ ಶಿಕ್ಷಕ ವೀರಣ್ಣ ತಿಮ್ಮಪ್ಪ ಮಡಿವಾಳ ಅವರ ಬೆಂಬಲಕ್ಕೆ ನೆಟ್ಟಿಗರು ನಿಂತುಕೊಂಡಿದ್ದಾರೆ.ಹೌದು ವಾಟ್ಸ್ ಆಪ್ ಸ್ಟೇಟಸ್ ಹಾಕಿದ್ದ ಇವರಿಗೆ ಸಹ ಶಿಕ್ಷಕನಿಗೆ ಶಿಕ್ಷಣ ಇಲಾಖೆ ಶಿಸ್ತು ಕ್ರಮದ ಎಚ್ಚರಿಕೆ ನೀಡಿ ನೋಟಿಸ್‌ ಜಾರಿ ಮಾಡಿದೆ.

ಸಧ್ಯ ಶಿಕ್ಷಣ ಇಲಾಖೆಯು ನೋಟೀಸ್ ನೀಡಿದ್ದು ಈ ಒಂದು ವಿಚಾರ ಕುರಿತು ಸಂಘಟನೆಯ ನಾಯಕರು ರಾಜ್ಯಾಧ್ಯಕ್ಷ ರು ಧ್ವನಿ ಎತ್ತಬೇಕಾಗಿತ್ತು ಆದರೆ ಮೌನ ವಾಗಿದ್ದು ಹೀಗಾಗಿ ಈ ಒಂದು ಇಲಾಖೆಯ ನಿರ್ಧಾರ ದಿಂದಾಗಿ ಈ ಕ್ರಮ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದು ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರುತ್ತಿದ್ದಾರೆ.ಸಧ್ಯ ಶಿಕ್ಷಣ ಇಲಾಖೆಯ ಈ ಕ್ರಮಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವಿರೋಧ ವ್ಯಕ್ತವಾಗ್ತಿದ್ದು ಸರ್ಕಾರ ಸರ್ವಾಧಿಕಾರಿ ವರ್ತನೆ ಖಂಡನೀಯ ಎಂದು ದೂರುತ್ತಿದ್ದಾರೆ.ಇನ್ನೂ ಹಲವು ಬಳಕೆದಾರರು ನಿಮ್ಮ ಬೆಂಬಲಕ್ಕೆ ನಾವಿದ್ದೇವೆ ಎನ್ನುತ್ತಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.