ಹುಬ್ಬಳ್ಳಿ –
ಇಸ್ಪೀಟು ಆಡುತ್ತಿದ್ದ ಅಡ್ಡೆ ಮೇಲೆ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ದಾಳಿ ಮಾಡಿದ್ದಾರೆ. ಹುಬ್ಬಳ್ಳಿಯ ಬ್ಯಾಹಟ್ಟಿ ಗ್ರಾಮದ ಬಸ್ ನಿಲ್ದಾಣದ ಹಿಂದೆ ಗುಂಪೊಂದು ಸೇರಿಕೊಂಡು ಇಸ್ಪೀಟು ಆಡುತ್ತಿದ್ದರು.ಖಚಿತವಾದ ಮಾಹಿತಿಯನ್ನು ಪಡೆದುಕೊಂಡ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ಮಾಡಿ ನಾಲ್ವರನ್ನು ಬಂಧನ ಮಾಡಿದ್ದಾರೆ.
ನಿಂಗಪ್ಪ ಕಮ್ಮಾರ,ಮಾಬುಸಾಬ ಅಣ್ಣಿಗೇರಿ, ಪಕ್ಕೀರಸಾಬ ಹಸನ್ ಸಾಬ್ ನದಾಫ್, ಮಕ್ತುಮ ಸಾಬ್ ಮೊರಬದ, ಹೀಗೆ ನಾಲ್ಕು ಜನರನ್ನು ಬಂಧನ ಮಾಡಲಾಗಿದೆ. ಬಂಧಿತರೆಲ್ಲರೂ ಬ್ಯಾಹಟ್ಟಿ ಗ್ರಾಮದವರಾಗಿದ್ದು.ಇನ್ಸ್ಪೆಕ್ಟರ್ ರಮೇಶ ಗೋಕಾಕ್ ಪಿಎಸ್ ಐ ಶ್ರೀಮತಿ ಚಾಮುಂಡೇಶ್ವರಿ ಮತ್ತು ಸಿಬ್ಬಂದಿಗಳಾದ ನಾರಾಯಣ ಹಿರೇಹೊಳಿ, ಮಂಜು, ಚಂದ್ರು ಸೇರಿದಂತೆ ಹಲವು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು