ಕೆರೆ ದಂಡೆಯ ಮೇಲೆ ಎಲೆ ತಟ್ಟುತ್ತಿದ್ದವರ ಬೆನ್ನು ತಟ್ಟಿದ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು

Suddi Sante Desk

ಹುಬ್ಬಳ್ಳಿ –

ಕೆರೆಯ ದಂಡೆಯ ಮೇಲೆ ಜೂಜಾಟವಾಡುತ್ತಿದ್ದ ಐದು ಜನರನ್ನು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ಕುಸುಗಲ್ಲ್ ಗ್ರಾಮದ ಕೆರೆ ದಂಡೆಯ ಮೇಲೆ ಇಸ್ಪೇಟ್ ಆಡುತ್ತಿದ್ದರು. ಖಚಿತವಾದ ಮಾಹಿತಿಯನ್ನು ಪಡೆದ ಹುಬ್ಬಳ್ಳಿಯ ಇನಸ್ಪೇಕ್ಟರ್ ರಮೇಶ ಗೋಕಾಕ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆ ಮಾಡಿ ಐವರನ್ನು ಬಂಧಿಸಿದ್ದಾರೆ.

ಅಬ್ದುಲ್ ಸಮದ್ , ಲಾಲ್ ಸಾಬ್ ಮೀರಜಕರ, ಖಾಸಿಂಸಾಬ್ ಮಿರಜನವರ, ಹಜಕಿರಸಾಬ ಕಮಡೋಳ್ಳಿ , ಮತ್ತು ಆದಂಸಾಬ ಮಿಶ್ರಿಕೋಟಿ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 5300 ನಗದು ಹಣ ಮತ್ತು ಎರಡು ಬೈಕ್ ಗಳನ್ನು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇನಸ್ಪೇಕ್ಟರ್ ರಮೇಶ ಗೋಕಾಕ ನೇತ್ರತ್ವದಲ್ಲಿ ನಡೆದ ಈ ಒಂದು ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ನಾರಾಯಣ ಹಿರೇಹೊಳಿ,ಮಹಾಂತೇಶ ನಾನಾಗೌಡ,ಫಕ್ರು ಎಲಿಗಾರ,ದಾಬೋಳಿ, ಡೇವಿಡ್ ಸೇರಿದಂತೆ ಹಲವು ಸಿಬ್ಬಂದಿಗಳು ರೇಡ್ ನಲ್ಲಿ ಪಾಲ್ಗೊಂಡಿದ್ದರು. ಸಧ್ಯ ಐವರನ್ನು ವಶಕ್ಕೇ ತಗೆದಕೊಂಡಿರು ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.