ಶಾಲಾ ಆವರಣದಲ್ಲಿ ನಿಂತುಕೊಂಡ ನೀರು ಕುರ್ಚಿ ಮೇಲೆ ಹತ್ತಿಕೊಂಡು ಬಂದ ಟೀಚರ್ ರಮ್ಮ – ಕುರ್ಚಿ ಗಳ ಸೇತುವೆ ಮಾಡಿದ ವಿದ್ಯಾರ್ಥಿ ಗಳು

Suddi Sante Desk

ಮಥುರಾ(ಉತ್ತರ ಪ್ರದೇಶ) –

ಶಾಲಾ ಶಿಕ್ಷಕಿಯೊಬ್ಬರು ಮಾಡಿರುವ ಎಡವಟ್ಟುವೊಂದು ಇದೀಗ ಅವರಿಗೆ ಸಂಕಷ್ಟ ತಂದೊಡ್ಡಿದ್ದು ಅದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.ಹೌದು ಶಾಲಾ ಆವರಣದಲ್ಲಿ ನೀರು ನಿಂತಿದ್ದ ಕಾರಣ ಶಿಕ್ಷಕಿಯೊ ಬ್ಬರು ಶಾಲೆಯೊಳಗೆ ಬರಲು ಕುರ್ಚಿಗಳ ಸೇತುವೆ ನಿರ್ಮಿಸಿ ವಿದ್ಯಾರ್ಥಿಗಳ ಆಸರೆಯಿಂದ ಒಳಗೆ ಬಂದಿರುವ ವಿಡಿಯೋ ವೈರಲ್ ಆಗಿದೆ.ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿ ರುವ ಶಿಕ್ಷಣ ಇಲಾಖೆ ಅವರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು ಅಮಾನತುಗೊಳಿಸಿದೆ.ನೀರಿನಲ್ಲಿ ನಡೆದು ಬಾರದ ಶಿಕ್ಷಕಿಗೆ ಕುರ್ಚಿಗಳ ಸೇತುವೆ ಮಾಡಿಕೊಂಡಿದ್ದು ಅಸಮಾಧಾನಕ್ಕೆ ಕಾರಣವಾಗಿದ್ದು ಆಕ್ರೋಶ ಕಂಡು ಬರುತ್ತಿದೆ.

ಮಥುರಾದ ಮಹಾವನ್ ತಹಸಿಲ್ ಪ್ರದೇಶದ ದಗೆಂಟಾದ ಬಲದೇವ್ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ. ಮಳೆಯ ಕಾರಣ ಶಾಲಾ ಅಂಗಳದಲ್ಲಿ ನೀರು ತುಂಬಿತ್ತು. ಅಲ್ಲಿಂದ ದಾಟಿ ಬರಲು ಶಾಲಾ ಶಿಕ್ಷಕಿಗೋಸ್ಕರ ಕುರ್ಚಿ ಹಾಕಲಾಗಿದ್ದು ನೀರಿನಲ್ಲಿ ನಿಂತುಕೊಂಡಿರುವ ವಿದ್ಯಾರ್ಥಿ ಗಳು ಅವರಿಗೆ ಸಹಾಯ ಮಾಡಿದ್ದಾರೆ.ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.ವಿಡಿಯೋ ನೋಡಿ ಎಚ್ಚೆತ್ತುಕೊಂಡಿರುವ ಶಿಕ್ಷಣ ಇಲಾಖೆ ಶಿಕ್ಷಕಿ ಪಲ್ಲವಿ ಅವರನ್ನ ಅಮಾನತುಗೊಳಿಸಿದ್ದಾರೆ.

ವಿಡಿಯೋ ವೈರಲ್ ಆದ ಬೆನ್ನಲ್ಲೇ ಶಿಕ್ಷಕಿ ಪಲ್ಲಿವಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಪ್ರಭಾರಿ ರಾಜಲಕ್ಷ್ಮಿ ಪಾಂಡೆ ಮಾಹಿತಿ ನೀಡಿದ್ದು ಈಗಾಗಲೇ ಅವರನ್ನ ಅಮಾನತುಗೊಳಿಸಲಾಗಿದ್ದು ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ ಎಂದಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.