ಹುಬ್ಬಳ್ಳಿ –
ಮೇಯರ್ ಜೊತೆ ಮಾತುಕತೆ ಕಾರ್ಯಕ್ರಮ ಮುಂದೂಡಿಕೆ – ಬುಧವಾರ ನಡೆಯಬೇಕಾಗಿದ್ದ ಕಾರ್ಯಕ್ರಮ ಫೆಬ್ರುವರಿ 12 ರಂದು ನಡೆಯಲಿದೆ ಪತ್ರಿಕಾ ಪ್ರಕಟಣೆ…..
ಸಾರ್ವಜನಿಕರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯಿಂದ ಮೊದಲ ಬಾರಿಗೆ ಮೇಯರ್ ಜೊತೆ ಮಾತುಕತೆ ಕಾರ್ಯಕ್ರಮ ಆರಂಭ ಮಾಡಲಾಗಿದೆ. ಈ ಹಿಂದೆ ಆಯುಕ್ತರಾಗಿದ್ದ ಡಾ ಈಶ್ವರ ಉಳ್ಳಾಗಡ್ಡಿ ಯವರ ಈ ಒಂದು ಹೊಸ ಕಾರ್ಯಕ್ರಮಕ್ಕೆ ಸಾರ್ವಜನಿಕರಿಂ ದಲೂ ಉತ್ತಮವಾಗಿ ಸ್ಪಂದನೆ ಸಿಕ್ಕಿದ್ದು ಎರಡನೇ ಕಾರ್ಯಕ್ರಮವನ್ನು ತಾಂತ್ರಿಕ ಕಾರಣಗಳಿಂದಾಗಿ ಮೇಯರ್ ಜೊತೆ ಮಾತುಕತೆ ಕಾರ್ಯಕ್ರಮವನ್ನು ಮುಂದೂಡಲಾಗಿದೆ.
ಹೌದು ಪ್ರತಿ ತಿಂಗಳು ಮೊದಲ ಬುಧವಾರ ನಡೆಯ ಬೇಕಾದ್ದ ಈ ಒಂದು ಕಾರ್ಯಕ್ರಮವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಅವಳಿ ನಗರದ ಜನರಿಗಾಗಿ ಈ ನೂತನ ವರ್ಷದಂದು ವಿನೂತನ ಜನಪರ ಕಾರ್ಯಕ್ರಮವನ್ನು ಪಾಲಿಕೆಯ ವತಿಯಿಂದ ಮಾಡಲಾಗುತ್ತಿದೆ. ಕುಡಿಯುವ ನೀರು, ಕಸ ವಿಲೇವಾರಿ, ರಸ್ತೆ, ಬೀದಿದೀಪ, ಒಳಚರಂಡಿ ಸೇರಿದಂತೆ ತಮ್ಮ ತಮ್ಮ ವಾರ್ಡ್ ಸಮಸ್ಯೆಗಳ ಜೊತೆಗೆ ವೈಯಕ್ತಿಕ ಸಮಸ್ಯೆಗಳ ಪರಿಹಾರಕ್ಕಾಗಿ ಮಾಡಲಾಗುತ್ತಿರುವ
ಈ ಒಂದು ಕಾರ್ಯಕ್ರಮ ದಿನಾಂಕ 05/02/2025 ಬುಧವಾರ ದಂದು ನಡೆಯಬೇಕಿದ್ದ “ಮೇಯರ್ ಜೊತೆ ಮಾತುಕತೆ ” ಎಂಬ ವಿನೂತನ ಕಾರ್ಯಕ್ರಮವನ್ನು ಮಹಾಪೌರರು ವಿದೇಶ ಪ್ರಯಾಣದಲ್ಲಿರುವ ಕಾರಣ ದಿನಾಂಕ 12.02.2025 ರ ಬುಧವಾರದಂದು ಮುಂದೂಡಲಾಗಿದೆ ಎಂದು ಆಯುಕ್ತರ ಕಚೇರಿಯಿಂದ ಪತ್ರಿಕಾ ಪ್ರಕಟಣೆಯ ಮೂಲಕ ತಿಳಿಸಲಾಗಿದೆ.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ.