ಕೃಷ್ಣಾನದಿಯಲ್ಲಿ ನೀರು ಪಾಲಾದ ಶಿಕ್ಷಕ ಮತ್ತು ವಿದ್ಯಾರ್ಥಿಗಳು ತರಗತಿಯ ನಂತರ ಸ್ನಾನಕ್ಕೆ ನದಿಗೆ ತೆರಳಿದ್ದರು…..

Suddi Sante Desk

ಆಂಧ್ರಪ್ರದೇಶ –

ಶಿಕ್ಷಕರೊಬ್ಬರು ಸೇರಿ ಐವರು ವಿದ್ಯಾರ್ಥಿಗಳು ನದಿಯಲ್ಲಿ ನೀರು ಪಾಲಾಗಿರುವ ಘಟನೆ ಆಂದ್ರಪ್ರದೇಶದ ಗುಂಟೂ ರಿನ ಅಚ್ಚಂಪೇಟೆಯ ಮಡಿಪಾಡು ನಲ್ಲಿ ನಡೆದಿದೆ. ಮಡಿ ಪಾಡು ಗ್ರಾಮದಲ್ಲಿನ ವೇದಾಂತ ಗುರುಕುಲ ವೇದ ಶಾಲೆ ಯ ಶಿಕ್ಷಕರೇ ಮತ್ತು ವಿದ್ಯಾರ್ಥಿಗಳೇ ನೀರು ಪಾಲಾದವರಾ ಗಿದ್ದಾರೆ ಸ್ನಾನಕ್ಕೆಂದು ಶಿಕ್ಷಕರ ಜೊತೆ ಕೃಷ್ಣಾನದಿ ನೀರಿಗೆ ಇಳಿದಿದ್ದಾರೆ 6 ವಿದ್ಯಾರ್ಥಿಗಳ ಪೈಕಿ ಐವರು ಜಲಸಮಾಧಿ ಯಾಗಿದ್ದಾರೆ.

ಮಕ್ಕಳ ಜೊತೆಗೆ ಗುರೂಜಿಯೂ ದುರಂತ ಅಂತ್ಯಕಂಡಿ ದ್ದಾರೆ.ಗುಂಟೂರು ಜಿಲ್ಲೆಯ ಅಚ್ಚಂಪೇಟ ಮಂಡಲದ ಮಡಿಪಾಡು ಸಮೀಪ ಕೃಷ್ಣಾ ನದಿಯಲ್ಲಿ ಸಂಭವಿಸಿದೆ. ಮಡಿಪಾಡು ಗ್ರಾಮದ ಶ್ವೇತಾ ಶೃಂಗಾಚಲಂ ವೇದಾಂತ ಗುರುಕುಲ ವೇದ ಶಾಲೆಯ ಗುರೂಜಿ(ಶಿಕ್ಷಕ) ಕೆ. ಸುಬ್ರಹ್ಮ ಣ್ಯಂ(24), ವಿದ್ಯಾರ್ಥಿಗಳಾದ ಮಧ್ಯಪ್ರದೇಶದ ಶಿವಶ ರ್ಮ(14), ಉತ್ತರ ಪ್ರದೇಶ ಮೂಲದ ಹರ್ಷಿತ್ ಶುಕ್ಲಾ (15)ಶುಭಂ ತ್ರಿವೇದಿ(17)ಅಂಶುಮಾನ್ ಶುಕ್ಲಾ,ಶಿವ ಶರ್ಮಾ(14) ಮತ್ತು ನಿತೀಶ್ ಕುಮಾರ್(15) ಮೃತರು. ಶಿಕ್ಷಕ ಸುಬ್ರಹ್ಮಣ್ಯಂ ಗುಂಟೂರು ಜಿಲ್ಲೆ ನರಸರಾವ್ ಪೇಟೆಯವರಾಗಿದ್ದಾರೆ

ಶಿಕ್ಷಕ ಸುಬ್ರಹ್ಮಣ್ಯಂ ಅವರು ಶುಕ್ರವಾರ ಸಂಜೆ ಶಾಲೆ ಮುಗಿದ ಬಳಿಕ 8 ವಿದ್ಯಾರ್ಥಿಗಳೊಂದಿಗೆ ನದಿತೀರಕ್ಕೆ ಬಂದಿದ್ದರು. ಈ ಪಕಿ ಶಿಕ್ಷಕ ಮತ್ತು 6 ವಿದ್ಯಾರ್ಥಿಗಳು ಸ್ನಾನಕ್ಕೆಂದು ನದಿಗೆ ಇಳಿದಿದ್ದು, ಆಳ ಜಾಗಕ್ಕೆ ಹೋಗಿದ್ದಾರೆ. ಈ ಪೈಕಿ 6 ಮಂದಿ ಈಜು ಬಾರದೆ ನೀರಲ್ಲಿ ಮುಳುಗಿ ಪ್ರಾಣಬಿಟ್ಟಿದ್ದಾರೆ.ಈಜು ಬಲ್ಲ ಓರ್ವ ವಿದ್ಯಾರ್ಥಿ ಬದುಕುಳಿ ದಿದ್ದು, ನದಿ ದಡದಲ್ಲೇ ಕುಳಿತಿದ್ದ ಉಳಿದ ಇಬ್ಬರು ವಿದ್ಯಾ ರ್ಥಿಗಳು ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ.ಸುದ್ದಿ ತಿಳಿ ಯುತ್ತಿದ್ದಂತೆ ಸ್ಥಳಕ್ಕೆ ಬಂದ ಪೊಲೀಸರು ಮತ್ತು ಈಜು ಗಾರರ ತಂಡವು ಶೋಧ ಕಾರ್ಯ ನಡೆಸಿ ಮೃತದೇಹ ಗಳನ್ನು ಹೊರಕ್ಕೆ ತೆಗೆದು ಆಯಾ ಕುಟುಂಬಸ್ಥರಿಗೆ ಹಸ್ತಾಂ ತರಿಸಲಾಗಿದೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.