ಆತ್ಮಹತ್ಯೆ ಗೆ ಶರಣಾದ ಶಿಕ್ಷಕ ಎರಡು ವರ್ಷಗಳಿಂದ ಬಾರದ ಸಂಬಳ ಮನನೊಂದ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ…..

Suddi Sante Desk

ನವದೆಹಲಿ –

ಎರಡು ವರ್ಷಗಳಿಂದ ಸಂಬಳ ಬಾರದ ಹಿನ್ನಲೆ ಯಲ್ಲಿ ಮ‌ನನೊಂದು ಶಿಕ್ಷಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ದೆಹಲಿಯಲ್ಲಿ ನಡೆದಿದೆ‌. ಹೌದು ಎರಡು ವರ್ಷಗಳಿಂದ ಸಂಬಳ ಸಿಕ್ಕಿಲ್ಲ ವೆಂದು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನಡೆದಿದೆ.

ರೋಹಿಣಿ ಪ್ರದೇಶದ ಖಾಸಗಿ ಶಾಲೆಯೊಂದರ ಶಿಕ್ಷಕ ತನೂಪ್ ಜೋಹರ್ ಆತ್ಮಹತ್ಯೆ ಮಾಡಿಕೊಂಡಿರುವ ಶಿಕ್ಷಕ ರಾಗಿದ್ದಾರೆ.ತಾಯಿ,ಸಹೋದರ ಹಾಗೂ ಹೆಂಡತಿಯೊಂದಿಗೆ ಜೀವನ ನಡೆಸುತ್ತಿದ್ದ ಅವರು ತಮ್ಮ ಮನೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಾಯುವುದಕ್ಕೂ ಮುನ್ನ ಡೆತ್ ನೋಟ್ ಬರೆದಿಟ್ಟಿದ್ದಾರೆ.

ಎರಡು ವರ್ಷಗಳಿಂದ ಸಂಬಳಕ್ಕಾಗಿ ಕೇಳಿದರೂ ಶಾಲೆಯ ಆಡಳಿತದವರು ಸಂಬಳ ಕೊಡುತ್ತಿಲ್ಲ. ನಮ್ಮ ಶಾಲೆ ಬಿಜೆಪಿ ಮಾಜಿ ಶಾಸಕ ಹಾಗೂ ಅವರ ಪತ್ನಿಗೆ ಸೇರಿದ್ದು, ನನ್ನ ಸಾವಿಗೆ ಅವರೇ ಕಾರಣ ಎಂದು ಅವರು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ ಅಂತೆ‌.ಆದರೆ ಈ ಬಗ್ಗೆ ಶಾಲೆಯ ಆಡಳಿತ ಯಾವು ದೇ ಪ್ರತಿಕ್ರಿಯೆ ಕೊಟ್ಟಿಲ್ಲ.ಈ ಹಿಂದೆ 2020ರಲ್ಲಿಯೇ ತನೂಪ್ ತಾವು ಕೆಲಸ ಮಾಡುತ್ತಿದ್ದ ಶಿಕ್ಷಣ ಸಂಸ್ಥೆ ಯಿಂದ ಸಂಬಳ ಬಂದಿಲ್ಲವೆಂದು ನ್ಯಾಯಾಲಯಕ್ಕೆ ಮೊಕದ್ದಮೆ ಹೂಡಿದ್ದರು. ಆದರೆ ಎಚ್ಚೆತ್ತುಕೊಳ್ಳದ ಆಡಳಿತ,ಅವರಿಂದ ಆನ್ ಲೈನ್ ತರಗತಿಗಳನ್ನು ಮಾಡಿಸುತ್ತಿತ್ತೇ ಹೊರೆತು ಸಂಬಳ ಕೊಟ್ಟಿರಲಿಲ್ಲ ಎಂದು ಆತನ ಕುಟುಂಬಸ್ಥರು ದೂರಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.