ಬೈಲಹೊಂಗಲ –
ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಬೆಳಗಾವಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಂಗಮೇಶ ಖನ್ನಿನಾಯ್ಕರ ಅವರನ್ನು ಸಂಘದಿಂದ ಉಚ್ಚಾಟನೆ ಮಾಡಲಾಗಿದೆ.ಸಂಘದ ವಿರುದ್ದ ಸಾಮಾಜಿಕ ಜಾಲ ತಾಣಗಳಲ್ಲಿ ಸಂದೇಶ ಹಾಕಿದ ಅಗೌರವ ತೋರಿದ್ದ ಕ್ಕಾಗಿ ಸಂಘದ ಶಿಸ್ತು ಸಮಿತಿ ಇದನ್ನು ಗಂಭೀರವಾಗಿ ತಗೆದುಕೊಂಡು ಸಂಘದಿಂದ ಉಚ್ಚಾಟನೆ ಮಾಡಲಾಗಿದೆ. ಸರಿ ಇದು ಒಂದು ವಿಚಾರವಾದರೆ ಇನ್ನೂ ಉಚ್ಚಾಟನೆ ಮಾಡುವ ಮುನ್ನ ಕಾರಣ ಕೇಳಿ ನೊಟೀಸ್ ನೀಡಬೇಕು ಹಾಗೇ ಮಾಹಿತಿಯನ್ನು ಪಡೆದುಕೊಂಡ ಮೇಲೆ ಸಂಘ ದಿಂದ ಉಚ್ಚಾಟನೆ ಮಾಡಬೇಕು ಆದರೆ ಯಾವುದೇ ನೊಟೀಸ್ ನ್ನು ನೀಡದೆ ಹೇಳದೆ ಕೇಳದೆ ಏಕಾಎಕಿಯಾಗಿ ಉಚ್ಚಾಟನೆ ಮಾಡಿದ್ದಲ್ಲದೇ ಸಾಮಾಜಿಕ ಗ್ರೂಪ್ ನಿಂದ ತಗೆದು ಹಾಕಿದ್ದಾರಂತೆ.
ಇದೇಲ್ಲವನ್ನು ಗಮನಿಸಿ ವಯಕ್ತಿಕವಾಗಿ ಸಾಕಷ್ಟುಪ್ರಮಾಣ ದಲ್ಲಿ ಗೌರವ ಹಾಳಾಗಿದ್ದು ನಾನು ಸಂಘಕ್ಕಾಗಿ ಸಾಕಷ್ಟು ಕೆಲಸಗಳನ್ನು ಮಾಡಿದ್ದು ಏಕಾಎಕಿಯಾಗಿ ನನ್ನನ್ನು ತಗೆದಿದ್ದು ತುಂಬಾ ನೋವಾಗಿದೆ ಎಂದುಕೊಂಡು ಶಿಕ್ಷಕ ಸಂಗಮೇಶ ಖನ್ನಿನಾಯ್ಕರ ಈಗ ಗ್ರಾಮೀಣ ಶಿಕ್ಷಕರ ಸಂಘದ ವಿರುದ್ದ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದಾರೆ. ಇದೇಲ್ಲವನ್ನು ಪ್ರಶ್ನೆ ಮಾಡಿ ಬೆಳಗಾವಿ ಜಿಲ್ಲೆಯ ಬೈಲಹೊಂ ಗಲ ನ್ಯಾಯಾಲಯದಲ್ಲಿ ಅರ್ಜಿಯನ್ನು ದಾಖಲು ಮಾಡಿ ದ್ದು ಈಗಾಗಲೇ ವಿಚಾರಣೆ ನಡೆದು ಸಧ್ಯ ಗ್ರಾಮೀಣ ಶಿಕ್ಷಕ ರ ಸಂಘದ ಶಿಸ್ತು ಸಮಿತಿಗೆ ನೊಟೀಸ್ ನ್ನು ಜಾರಿ ಮಾಡಿ ದ್ದಾರಂತೆ.ಒಂದು ಅಮಾನತು ಪ್ರಶ್ನಿಸಿ ಹಾಗೇ ಮಾನನಷ್ಟ ಮೊಕದ್ದವೆ ಕುರಿತಂತೆ ಪರಿಹಾರಕ್ಕಾಗಿ 5 ಲಕ್ಷ ರೂಪಾಯಿ ಕೇಳಿದ್ದಾರೆ.ಬೆಳಗಾವ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾ ಗಿದ್ದ ಇವರನ್ನು ಏಕಾಎಕಿಯಾಗಿ ತಗೆದು ಹಾಕಿದ್ದನ್ನು ಉಲ್ಲೇಖ ಮಾಡಿದ್ದಾರೆ.ವಾಟ್ಸ್ ಆಪ್ ನಲ್ಲಿ ಸಂಘಟನೆ ಕುರಿತಂತೆ ಪ್ರಶ್ನೆ ಮಾಡಿದ್ದರು.ಹಾಗೇ ಮಹಿಳಾ ಮೀಸಲಾತಿ ನೀಡಿಲ್ಲ ಇನ್ನೂ ರಾಜ್ಯಾಧ್ಯಕ್ಷರ ಕಾರ್ಯ ವೈಖರಿ ಕುರಿತಂತೆ ಸಂಘಟನೆ ಕುರಿತಂತೆ ಪ್ರಶ್ನೆ ಮಾಡಿದ್ದಕ್ಕಾಗಿ ವಾಟ್ಸ್ ಆಪ್ ನಿಂದ ತಗೆದು ಹಾಕಿದ್ದಾರೆ ಅಲ್ಲದೇ ಬಹಿರಂಗವಾಗಿ ಸಂದೇಶವನ್ನು ಹಾಕಿ ಗೌರವವನ್ನು ಹಾಳು ಮಾಡಿದ್ದಾ ರೆಂದು ಸಂಗಮೇಶ ಖನ್ನಿನಾಯ್ಕರ ಅವರು ಉಲ್ಲೇಖವನ್ನು ಮಾಡಿದ್ದಾರೆ.ಇದೇಲ್ಲವನ್ನು ಪ್ರಶ್ನೆ ಮಾಡಿ ನ್ಯಾಯಾಲಯದ ಮೆಟ್ಟಿಲು ಹತ್ತಿದ ಸಂಗಮೇಶ ಖನ್ನಿನಾಯ್ಕರ ಅವರ ಅರ್ಜಿಯನ್ನು ಪುರಸ್ಕರಿಸಿ ಈಗಾಗಲೇ ನೊಟೀಸ್ ನ್ನು ಜಾರಿ ಮಾಡಿದೆ.ಇನ್ನೂ ಸಂಘದಲ್ಲಿ ಸರ್ವಾಧಿಕಾರಿ ಧೋರಣೆ ಆಗುತ್ತಿದೆ ಎಂದಿರುವ ಇವರು ಸಂಘದ ಶಿಸ್ತು ಸಮಿತಿ ಅಧ್ಯಕ್ಷ ಮಹಮ್ಮದ ಹನಿಫ್ ಐ ಮುನವಳ್ಳಿ ಇವರಿಗೆ ನೊಟೀಸ್ ಜಾರಿಗೆ ಮಾಡರಾಗಿದೆ ಮುಂಚಿತವಾಗಿ ಈ ಕುರಿತಂತೆ ನೊಟೀಸ್ ನೀಡಿಲ್ಲ ಹೀಗಾಗಿ ಇದೇಲ್ಲವನ್ನು ಪ್ರಶ್ನೆ ಮಾಡಿ ನ್ಯಾಯಾಲಯದ ಮೆಟ್ಟಿಲು ಹತ್ತಿದ್ದು ಇನ್ನೂ ಇದಕ್ಕೆ ಏನು ಉತ್ತರ ಕೊಡುತ್ತಾರೆ ಎಂಬೊದನ್ನು ಕಾದು ನೋಡಬೇಕಿದೆ.