This is the title of the web page
This is the title of the web page

Live Stream

[ytplayer id=’1198′]

April 2025
T F S S M T W
 12
3456789
10111213141516
17181920212223
24252627282930

| Latest Version 8.0.1 |

Local News

ಹೆಂಡತಿ ಮಗಳನ್ನು ನೋಡಲು ಬಂದವ ಹೆಣವಾದ – ಅಂಚಟಗೇರಿ ನಡೆದಿದ್ದೇನು ಗೋತ್ತಾ

WhatsApp Group Join Now
Telegram Group Join Now

ಹುಬ್ಬಳ್ಳಿ-

ಕಲ್ಲಿನಿಂದ ಜಜ್ಜಿ ಯುವನಕನನ್ನು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಹುಬ್ಬಳ್ಳಿ ತಾಲ್ಲೂಕಿನ ಅಂಚಟಗೇರಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಚೌರಗುಡ್ಡ ಹೋಗುವ ರಸ್ತೆಯಲ್ಲಿ ಕೊಲೆ ಮಾಡಲಾಗಿದೆ.ಹುಬ್ಬಳ್ಳಿ ತಾಲೂಕಿನ ಅಂಚಟಗೇರಿ ಗ್ರಾಮದ ಚೌರಗುಡ್ಡಗೆ ಹೊಗುವ ರಸ್ತೆಯಲ್ಲಿ ಘಟನೆ ಈ ಒಂದು ಭೀಕರ ಕೊಲೆ ನಡೆದಿದೆ.

ಜಗದೀಶ ಮನೋಹರ ಕೊಲ್ಲಾಪೂರ ಕೊಲೆಯಾದ ವ್ಯಕ್ತಿಯಾಗಿದ್ದಾನೆ. ಹಾವೇರಿ ಜಿಲ್ಲೆಯ ಹಾನಗಲ್ಲ್ ನಿವಾಸಿಯಾಗಿರುವ ಜಗದೀಶ್ ಮನೋಹರ ಕೊಲ್ಲಾಪೂರ ಪತ್ನಿಯ ಊರು ಅಂಚಟಗೇರಿ ಗ್ರಾಮ. ಕಳೆದ ನಾಲ್ಕು ತಿಂಗಳ ಹಿಂದೆ ಹೆರಿಗೆಯಾಗಿ ತವರು ಮನೆಯಲ್ಲಿರುವ ಜಗದೀಶ್ ತನ್ನ ಹೆಂಡತಿ ಮಗಳನ್ನು ನೋಡಿಕೊಂಡು ಹೋಗಲು ಬಂದಿದ್ದನು. ನಿನ್ನೇ ಹಾವೇರಿಯ ಹಾನಗಲ್ಲ್ ಬಂದು ಇವತ್ತು ಮರಳಿ ಊರಿಗೆ ಹೋಗುವ ಯೋಚನೆಯಲ್ಲಿದ್ದನು ಜಗದೀಶ್. ಹೆಂಡತಿ ಮಗಳನ್ನು ನೋಡಿದ್ದಾನೊ ಇಲ್ಲ ಇವನಂಥೂ ರಸ್ತೆಯಲ್ಲಿ ಹೆಣವಾಗಿ ಬಾರದ ಲೋಕಕ್ಕೇ ಹೋಗಿದ್ದಾನೆ. ಚೌರಗುಡ್ಡ ರಸ್ತೆಯ ಪಕ್ಕದಲ್ಲಿ ಕಲ್ಲಿನಿಂದ ತಲೆಗೆ ಜಜ್ಜಿ ಭೀಕರವಾಗಿ ಜಗದೀಶ ನನ್ನು ಕೊಲೆ ಮಾಡಲಾಗಿದೆ.

ಕೊಲೆಯಾದ ವಿಷಯ ತಿಳಿದ ಹುಬ್ಬಳ್ಳಿ ಗ್ರಾಮೀಣ ಇನಸ್ಪೇಕ್ಟರ್ ರಮೇಶ ಗೋಕಾಕ ತಮ್ಮ ಸಿಬ್ಬಂದ್ದಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕೊಲೆಯನ್ನು ಯಾತಕ್ಕಾಗಿ ಮಾಡಿದ್ದಾರೆ ಯಾರು ಮಾಡಿದ್ದಾರೆ ಹೀಗೆ ಎಲ್ಲಾ ಮಾಹಿತಿಯನ್ನು ಪೊಲೀಸರು ಕಲೆಹಾಕುತ್ತಿದ್ದಾರೆ.ಸ್ಥಳದಲ್ಲಿ ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ಗಳಾದ ಡೇವಿಡ್ ಸೇರಿದಂತೆ ಹಲವರು ಇದ್ದರು.


Google News

 

 

WhatsApp Group Join Now
Telegram Group Join Now
Suddi Sante Desk