ವರ್ಷ ಕಳೆದರು ಇನ್ನೂ ಮುಗಿಯದ ವರ್ಗಾವಣೆ ಗೋಳು – ಹೊಸ ವರ್ಷದಲ್ಲಾ ದರೂ ಸಿಗುತ್ತಾ ವರ್ಗಾವಣೆಗೆ ಮುಕ್ತಿ ನಿರೀಕ್ಷೆ ಯಲ್ಲಿದ್ದಾರೆ ನಾಡಿನ ಶಿಕ್ಷಕರು…..

Suddi Sante Desk

ಬೆಂಗಳೂರು –

ಯಾರಿಗೂ ಯಾವ ಇಲಾಖೆಗೂ ಇಲ್ಲದ ಶಿಕ್ಷಕರ ವರ್ಗಾ ವಣೆಯ ಗೋಳು ಇನ್ನೂ ಮುಗಿಯುತ್ತಿಲ್ಲ ಅಂತ್ಯ ಕಾಣು ತ್ತಿಲ್ಲ ಹೌದು ಈಗಾಗಲೇ ರಾಜ್ಯದಲ್ಲಿ ವರ್ಗಾವಣೆಯ ಪ್ರಕ್ರಿಯೆ ಆರಂಭವಾಗಿದ್ದರು ಕೂಡಾ ಬೆರಳೆಣಿಕೆಯಷ್ಟು ಶಿಕ್ಷಕರು ಮಾತ್ರ ವರ್ಗಾವಣೆಯಾಗಿದ್ದು ಅವೈಜ್ಞಾನಿಕವಾದ ಈ ಒಂದು ವರ್ಗಾವಣೆ ಯಿಂದಾಗಿ ಸರ್ಕಾರಿ ಶಾಲೆ ಶಿಕ್ಷಕರು ಪರದಾಡುತ್ತಿದ್ದು ಸರ್ಕಾರದ ವರ್ಗಾವಣೆಯ ವಿಳಂಬದ ದೋರಣೆಯಿಂದ ಸಮಸ್ಯೆ ಎದುರಿಸುತ್ತಿದ್ದಾರೆ.

ವರ್ಗಾವಣೆ ಇಲ್ಲದೇ ಅನೇಕ ಶಿಕ್ಷಕರು ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.ವಿವಿಧೆಡೆ ಸೇವೆ ಸಲ್ಲಿಸುತ್ತಿರುವವರು 10 ರಿಂದ 12 ವರ್ಷಳಾದರು ವರ್ಗಾವಣೆ ಆಗುತ್ತಿಲ್ಲ.ಅಲ್ಲದೇ ವಿವಿಧ ಸಮಸ್ಯೆಗಳನ್ನು ಎದುರಿಸುವಂತಾಗಿದೆ.

ಕುಟುಂಬಕ್ಕಾಗಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು ಕುಟುಂಬ ವನ್ನೇ ಕಳೆದುಕೊಳ್ಳುವ ಸ್ಥಿತಿ ಶಿಕ್ಷಕರಿಗೆ ಬಂದೊದಗಿದೆ ಕೌಟುಂಬಿಕ ಕಲಹಗಳು ಆಗುತ್ತಿವೆ.ಕೆಲವರು ಒಂಟಿಯಾಗಿ ಜೀವನ ಮಾಡಬೇಕಾದ ಸ್ಥಿತಿ ಇದೆ.ಬೇರೆ ಬೇರೆ ಜಿಲ್ಲೆ ಗಳಿಂದ ಬಂದು ಎಲ್ಲೆಂದರಲ್ಲಿ ಬಂದು ಸೇವೆ ಸಲ್ಲಿಸುತ್ತಿದ್ದು ಈಗ ವರ್ಗಾವಣೆ ಆಗುತ್ತಿಲ್ಲ ಎನ್ನುತ್ತಿದ್ದು ಇದರ ನಡುವೆ ಮತ್ತೊಂದು ಬೆಂಗಳೂರು ಚಲೋ ಹೋರಾಟಕ್ಕೆ ಸಿದ್ದ ರಾಗುತ್ತಿದ್ದಾರೆ ರಾಜ್ಯದ ಶಿಕ್ಷಕರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.