This is the title of the web page
This is the title of the web page

Live Stream

[ytplayer id=’1198′]

May 2025
T F S S M T W
1234567
891011121314
15161718192021
22232425262728
293031  

| Latest Version 8.0.1 |

Local News

1.50 ಲಕ್ಷ ರೂಪಾಯಿ ಕದ್ದು ಪರಾರಿಯಾದ ಕಳ್ಳ – ಬಂಗಾರ ಅಡವಿಟ್ಟು ತಗೆದುಕೊಂಡು ಹೋಗುತ್ತಿದ್ದ ಹಣ ಕಳ್ಳತನ – ಕಳ್ಳನ ಕರಾಮತ್ತು ಸಿಸಿ ಟಿವಿಯಲ್ಲಿ ಸೆರೆ

WhatsApp Group Join Now
Telegram Group Join Now

ಧಾರವಾಡ –


ಬ್ಯಾಂಕ್ ನಿಂದ ತಗೆದುಕೊಂಡು ಹೋಗುತ್ತಿದ್ದ ಹಣವನ್ನು ಕಳ್ಳನೊಬ್ಬ ಕದ್ದು ಪರಾರಿಯಾಗಿರುವ ಘಟನೆ ನವಲಗುಂದದಲ್ಲಿ ನಡೆದಿದೆ. ನವಲಗುಂದ ಪಟ್ಟಣದ ಕರ್ನಾಟಕ ಬ್ಯಾಂಕ್ ನ ಎದುರು ಈ ಒಂದು ಘಟನೆ ನಡೆದಿದೆ.ಗುಡಿಸಾಗರ ಗ್ರಾಮದ ಸಿದ್ದಪ್ಪ ಪೂಜಾರ ಎಂಬುವವರಿಗೆ ಸೇರಿದ ಹಣವಾಗಿದೆ. ಅಡಚಣೆಗಾಗಿ ತುರ್ತಾಗಿ ಹಣ ಬೇಕಾಗಿತ್ತು ಹೀಗಾಗಿ ಮನೆಯಲ್ಲಿನ ಚಿನ್ನಾಭರಣವನ್ನು ಸಿದ್ದಪ್ಪ ಬ್ಯಾಂಕ್ ನಲ್ಲಿ ಇಟ್ಟಿದ್ದಾರೆ. ಬಂಗಾರವನ್ನು ಬ್ಯಾಂಕ್ ನಲ್ಲಿ ಅಡವಿಟ್ಟು 1.50 ಲಕ್ಷ ರೂಪಾಯಿ ಹಣವನ್ನು ತಗೆದುಕೊಂಡು ಒಯ್ಯುತ್ತಿದ್ದರು ಸಿದ್ದಪ್ಪ.

ಇವರು ಬ್ಯಾಂಕ್ ನಿಂದ ಹೊರಗೆ ಬಂದು ತಮ್ಮ ಬೈಕ್ ನ ಹಿಂಬದಿಯಲ್ಲಿರುವ ಬ್ಯಾಗ್ ನಲ್ಲಿ ಹಣದ ಬ್ಯಾಗ್ ಇಟ್ಟುಕೊಂಡು ಹೊರಟಿದ್ದರು. ಇದನ್ನು ಬ್ಯಾಂಕ್ ನ ಮುಂದೆ ಕಾಯುತ್ತಾ ಕುಳಿತು ಹೊಂಚು ಹಾಕಿದ ಕಳ್ಳನೊರ್ವ ಬೈಕ್ ಮುಂದೆ ಹೋಗತಾ ಇದ್ದಂತೆ ಹಿಂಬದಿಯಿದ್ದ ಬ್ಯಾಗ್ ಕದ್ದು ಪರಾರಿಯಾಗಿದ್ದಾನೆ. ನಿನ್ನೆ ಮಧ್ಯಾಹ್ನ ಈ ಒಂದು ನಡೆದ ಘಟನೆ ನಡೆದಿದೆ. ಈ ಕುರಿತಂತೆ ಸಿದ್ದಪ್ಪ ನವಲಗುಂದ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

ಸಧ್ಯ ಪ್ರಕರಣ ದಾಖಲು ಮಾಡಿಕೊಂಡಿರುವ ನವಲಗಂದ ಪೊಲೀಸರು ತನಿಖೆ ಮಾಡ್ತಾ ಇದ್ದಾರೆ.ತುರ್ತಾಗಿ ಹಣ ಬೇಕಾಗಿದೆ ಎಂದುಕೊಂಡು ಮನೆಯಲ್ಲಿನ ಎಲ್ಲಾ ಬಂಗಾರವನ್ನು ಬ್ಯಾಂಕ್ ನಲ್ಲಿ ಅಡವಿಟ್ಟು ಬ್ಯಾಂಕ್‌ನಿಂದ ತೆಗೆದುಕೊಂಡು ಹೊರಟಿದ್ದ ಹಣಕ್ಕೇ ಕನ್ನ ಹಾಕಿದ ಕಳ್ಳನ ಕರಾಮತ್ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.ಬೈಕ್ ಸವಾರ ಮೆಲ್ಲಗೆ ಮುಂದೆ ಹೊರಟಿದ್ದ ಸಮಯದಲ್ಲಿ ಕಳ್ಳನೊರ್ವ ಹಣವನ್ನು ಕದ್ದು ಪರಾರಿಯಾಗಿದ್ದಾನೆ. ಕ್ಷಣ ಮಾತ್ರದಲ್ಲಿ ಹಣದ ಬ್ಯಾಗ್ ಎಗರಿಸಿ ಪರಾರಿಯಾಗಿದ್ದು ಪೊಲೀಸರು ಕಳ್ಳನ ಬಂಧನಕ್ಕೇ ಜಾಲ ಬೀಸಿದ್ದಾರೆ.


Google News

 

 

WhatsApp Group Join Now
Telegram Group Join Now
Suddi Sante Desk