ಕೊರೊನಾ ಮಹಾಮಾರಿಗೆ ಒಂದೇ ಕುಟುಂಬದ ಐವರು ಸಾವು – ಮನ ಕಲಕುವ ಘಟನೆಗೆ ಸಾಕ್ಷಿ ಯಾಯಿತು ಈ ಕುಟುಂಬ…..

Suddi Sante Desk

ಪುಣೆ –

ಮಹಾಮಾರಿ ಕೊರೊನಾ ಗೆ ಒಂದೇ ಕುಟುಂಬದ ಐವರು ಸಾವಿಗೀಡಾದ ಘಟನೆ ಪುಣೆಯಲ್ಲಿ ನಡೆದಿದೆ ಅಲ್ಲದೇ ಮನಕಲಕುವ ಘಟನೆಯೊಂದಕ್ಕೆ ಪುಣೆ ಸಾಕ್ಷಿಯಾಗಿದೆ.ಮಹಾಮಾರಿ ಕೊರೊನಾ ದಿಂದ ಒಬ್ಬರಾದ ಮೇಲೆ ಒಬ್ಬರಂತೆ ಒಂದೇ ಕುಟುಂ ಬದ ಐವರು ಮೃತಪಟ್ಟಿದ್ದಾರೆ. ಮೃತರನ್ನು ಶಂಕರ್ ಜಾಧವ್, ಅವರ ಪತ್ನಿ ಅಲ್ಕಾ ಜಾಧವ್ (62), ಮಕ್ಕಳಾದ ರೋಹಿತ್ (38) ಮತ್ತು ಅತುಲ್ ಜಾಧವ್ (40) ಮತ್ತು ವೈಶಾಲಿ ಗಾಯಕ್ವಾಡ್ (43) ಎಂದು ಗುರುತಿಸಲಾಗಿದೆ.

ಜನವರಿ 15 ರಂದು ಕೋವಿಡ್ ಸೋಂಕಿಗೆ ಒಳಗಾಗಿ ಮೊದಲು ಶಂಕರ್ ಜಾಧವ್ ಸಾವನ್ನಪ್ಪಿದ್ದಾರೆ. ಎರ ಡು ತಿಂಗಳ ಬಳಿಕ ಮೃತ ಶಂಕರ್ ಜಾಧವ್ ಹೆಸರಲ್ಲಿ ಪೂಜೆ ಮಾಡಿಸಲೆಂದು ಉಳಿದ ನಾಲ್ವರು ಒಂದೆಡೆ ಸೇರಿದ್ದಾರೆ. ಒಬ್ಬೊಬ್ಬರಾಗಿಯೇ ಅನಾರೋಗ್ಯಕ್ಕೆ ತುತ್ತಾಗಿದ್ದು ಎಲ್ಲರ ವರದಿ ಪಾಸಿಟಿವ್ ಬರುತ್ತಾ ಹೋಗಿದೆ. ಕೇವಲ 15 ದಿನಗಳಲ್ಲಿಯೇ ಒಬ್ಬರಾದ ಮೇಲೆ ಒಬ್ಬರಂತೆ ನಾಲ್ವರೂ ಸಾವನ್ನಪ್ಪಿದ್ದಾರೆ.

ಮಾರ್ಚ್ 30 ರಂದು ಖೇದ್ ಶಿವಪುರದ ಶ್ಲೋಕ್ ಆಸ್ಪತ್ರೆಯಲ್ಲಿ ವೈಶಾಲಿ, ಏಪ್ರಿಲ್ 3 ರಂದು ಬ್ಯಾನರ್ ಕೋವಿಡ್ ಕೇಂದ್ರದಲ್ಲಿ ರೋಹಿತ್, ಮರುದಿನ ಏಪ್ರಿಲ್ 4 ರಂದು ವಿನೋದ್ ಮೆಮೋರಿಯಲ್ ಆಸ್ಪತ್ರೆಯಲ್ಲಿ ಅಲ್ಕಾ ಶಂಕರ್, ಏಪ್ರಿಲ್ 14 ರಂದು ದೇವಯಾನಿ ಆಸ್ಪತ್ರೆಯಲ್ಲಿ ಅತುಲ್ ಕೊನೆಯುಸಿರೆ ಳೆದಿದ್ದಾರೆ.

ಮೃತ ವೈಶಾಲಿ ಅವರ ಪತಿ ತಮ್ಮ ಕುಟುಂಬವನ್ನು ಉಳಿಸಿಕೊಳ್ಳಲು ಎಷ್ಟೇ ಪ್ರಯತ್ನಿಸಿದರೂ ಕೊರೊ ನಾ ಬಿಡಲೇ ಇಲ್ಲ, ಕೊನೆಗೂ ಬಲಿಪಡೆದೆ ಬಿಟ್ಟಿತು. ಅತುಲ್ ಮತ್ತು ರೋಹಿತ್ ಇಬ್ಬರು ತಮ್ಮ ಹೆಂಡತಿ ಮಕ್ಕಳನ್ನು ಅಗಲಿದ್ದು ಅವರಿಗೆ ಈ ನೋವಿನಿಂದ ಹೊರಬರಲು ಆಗುತ್ತಿಲ್ಲ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.