ಇದೇ ವರ್ಷ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ 7. ನೇ ವೇತನ CM ಮಾತು – ರಾಜ್ಯದ ಸರ್ಕಾರಿ ನೌಕರರ ಹಿತರಕ್ಷಣೆ ನಮ್ಮ ಜವಾಬ್ದಾರಿ ಎಂದ ನಾಡ ದೊರೆ…..

Suddi Sante Desk

ಬೆಂಗಳೂರು –

ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಸರ್ಕಾರದ ಮಾದರಿ ಯ ವೇತನವನ್ನು ಇದೇ ವರ್ಷ ಜಾರಿ ಮಾಡೇ ಮಾಡುತ್ತೇವೆ ಅದು ನಮ್ಮ ಜವಾಬ್ದಾರಿ ಅದರಲ್ಲಿ ಬೇರೆ ಯಾವುದೇ ಮಾತು ಇಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು ಬೆಂಗಳೂರಿನಲ್ಲಿ ಮಾತನಾಡಿದ ಅವರು ರಾಜ್ಯ ಸರ್ಕಾರಿ ನೌಕರರಿಗೆ ಬಜೆಟ್ ನಲ್ಲಿ ತೀವ್ರ ನಿರಾಸೆಯಾಗಿದೆ ಎಂಬ ವಿಚಾರ ಕುರಿತು ಮಾಧ್ಯಮ ದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ಇದೇ ವರ್ಷ ಅದನ್ನು ನಾವು ಜಾರಿಗೆ ತರುವುದಾಗಿ ಹೇಳಿದರು

ಬಜೆಟ್ ನ ನಂತರ ನೌಕರರಿಗೆ ವೇತನ ನೀಡುವ ಕುರಿತು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ರಾಜ್ಯ ಸರ್ಕಾರಿ ನೌಕರರ ಸಂಘದವರೊಂದಿಗೆ ನಾನು ಮಾತ ನಾಡಿದ್ದೇನೆ ಅವರಿಗೆ ಈ ಒಂದು ವಿಚಾರ ಕುರಿತು ಹೇಳಿದ್ದು ನಿರಾಸೆಯಾಗೊದು ಬೇಡ ಹೇಳಿದ್ದು ಇದೇ ವರ್ಷ ರಾಜ್ಯದ ಸರ್ಕಾರಿ ನೌಕರರಿಗೆ ಕೇಂದ್ರ ಮಾದರಿಯ 7. ನೇ ವೇತನ ವನ್ನು ಸೂಕ್ತ ಸಮಯದಲ್ಲಿ ಜಾರಿ ಮಾಡೊದಾಗಿ ಹೇಳಿದರು

ಇದರೊಂದಿಗೆ ಬಜೆಟ್ ನಂತರ ತುಂಬಾ ನಿರಾಶೆ ಯಾಗಿದ್ದ ರಾಜ್ಯದ ಸರ್ಕಾರಿ ನೌಕರರಿಗೆ CM ಸಂತೋಷದ ಸುದ್ದಿ ಯನ್ನು ನೀಡಿದ್ದು ಇದರೊಂದಿಗೆ ರಾಜ್ಯದ ಸರ್ಕಾರಿ ನೌಕರರ ಹಿತರಕ್ಷಣೆ ನಮ್ಮ ಜವಾಬ್ದಾರಿ ಎಂದಿದ್ದಾರೆ ನಾಡ ದೊರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.