2023 ರವರೆಗೆ CM ಬಸವರಾಜ ಬೊಮ್ಮಾಯಿ ಇರತಾರೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ – ಮೋದಿ ಸರ್ಕಾರ ಭ್ರಷ್ಟಾಚಾರ ಸಹಿಸೊದಿಲ್ಲ

Suddi Sante Desk

ಹುಬ್ಬಳ್ಳಿ –

2023 ರವರೆಗೆ CM ಬಸವರಾಜ ಬೊಮ್ಮಾಯಿ ಇರತಾರೆ ಎನ್ನುತ್ತಾ ಎಲ್ಲಾ ಊಹಾಪೋಹಗಳಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೆರೆ ಏಳೆದರು.ಹುಬ್ಬಳ್ಳಿಯಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಮೋದಿ ಸರ್ಕಾರ ಯಾವತ್ತೂ ಭ್ರಷ್ಟಾಚಾರವನ್ನು ಸಹಿಸೊದಿಲ್ಲವೆಂದರು. ಇನ್ನೂ ಗುತ್ತಿಗೆದಾರರ ಸಂಘದಿಂದ ಪ್ರಧಾನಿಗೆ ಪತ್ರ ವಿಚಾರ ಕುರಿತು ಮಾತನಾಡಿದ ಅವರು ಅದೊಂದು ಬೇಸ್ ಲೆಸ್ ಆರೋಪವಾಗಿದೆ ಎಂದರು.

ಅವರ ಹತ್ತಿರ ಏನಾದ್ರು ಸಾಕ್ಷಿ ಇದ್ರೆ ಕೊಡ್ಲಿ ಅದನ್ನ ತನಿಖೆ ಮಾಡೋಣ.ಮೋದಿ ಸರ್ಕಾರದಲ್ಲಿ ಭ್ರಷ್ಟಾಚಾರವನ್ನು ಸಹಿಸೋದಿಲ್ಲವೆಂದರು.ಈ ಮಧ್ಯೆ ಆಧಾರವಿದ್ರೆ ಅವರು ದೂರು ನೀಡಲಿ.ಸಿಎಂ ಬದಲಾವಣೆಯಾಗ್ತಾರೆ ಎನ್ನೋ ಈಶ್ವರಪ್ಪ ಹೇಳಿಕೆ ವಿಚಾರ ಕುರಿತು ಮಾತನಾಡಿ ಆ ರೀತಿ ಏನೂ ಇಲ್ಲ ಸಿಎಂ ಬದಲಾಣೆಯಾಗೋದಿಲ್ಲ ಎಂದರು

ಈಶ್ವರಪ್ಪನವರು ಶಿಘ್ರವೇ ಬದಲಾವಣೆ ಆಗ್ತಾರೆ ಅಂತ ಹೇಳಿಲ್ಲ.ಆದ್ರೂ ಈ ರೀತಿ ಹೇಳಿಕೆ ನೀಡೋದು ತಪ್ಪು ಪ್ರಧಾನಿಯವರನ್ನ ದೇವೆಗೌಡ್ರು ಭೇಟಿಯಾಗಿದ್ದಾರೆಅವರು ಕೆಲವು ವಿಷಯಗಳ ಬಗ್ಗೆ ಚರ್ಚೆ ಮಾಡಿದ್ದಾರೆಂದರು. ರಾಜಕೀಯವಾಗಿ ಮಾತಾನಾಡಿದ್ದಾರೆ ಅಂತ ಹೇಳಿಲ್ಲ. ಹಾಸನದ ಐಐಟಿ ಮತ್ತು ಕೆಲವು ಅಭಿವೃದ್ದಿ ವಿಷಯಗಳ ಬಗ್ಗೆ ಮಾತನಾಡಿದ್ದಾರೆ.ಆದ್ರೆ‌ ಜೆಡಿಎಸ್ ಜೊತೆ ಮೈತ್ರಿ ವಿಚಾರ ನನ್ನ ಗಮನಕ್ಕೆ ಬಂದಿಲ್ಲ.ಆ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.