ವಿಧಾನ ಸಭೆಯಲ್ಲಿ ಮಂಡನೆ ಯಾಯಿತು ಶಿಕ್ಷಕರ ವರ್ಗಾವಣೆ ವಿಧೇಯಕ ಬಿ ಸಿ ನಾಗೇಶ್ ಅವರಿಂದ ಮಂಡನೆ ಇನ್ನಾದರೂ ಪರಿಹಾರ ಸಿಗುತ್ತಾ ಶಿಕ್ಷಕರ ವರ್ಗಾವಣೆ ಗೆ ಮುಕ್ತಿ…..

Suddi Sante Desk

ಬೆಂಗಳೂರು –

ಶಿಕ್ಷಕರ ವರ್ಗಾವಣಾ ವಿಧೇಯಕ ತಿದ್ದುಪಡಿ ಬಿಲ್ ನ್ನು ವಿಧಾನ ಸಭೆಯಲ್ಲಿ ಮಂಡಿಸಲಾಯಿತು.ಹೌದು ಶಿಕ್ಷಣ ಸಚಿವ ಬಿ ಸಿ ನಾಗೇಶ್ ಇಂದು ವಿಧಾನಸಭೆಯಲ್ಲಿ ಈ ಒಂದು ಬಿಲ್ ನ್ನು ಮಂಡಿಸಿದರು.

ಹೌದು ಶಿಕ್ಷಕರ ವರ್ಗಾವಣೆ ಈ ಒಂದು ವಿಧೇಯಕ ಬಿಲ್ ನ್ನು ಸಚಿವರು ಮಂಡಿಸುತ್ತಿದ್ದಂತೆ ಇದು ಕೂಡಾ ಸದನದಲ್ಲಿ ಅಂಗೀಕಾರ ಗೊಂಡಿತು.ಈ ಒಂದು ತಿದ್ದುಪಡಿ ವಿಧೇಯಕ ವನ್ನು ಮಂಡಿಸಿದರು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಬಿ.ಸಿ. ನಾಗೇಶ್ ಅವರು

ಇನ್ನೂ ಈ ಒಂದು ವಿಧೇಯಕ ಮಂಡನೆಯಾಗುತ್ತಿದ್ದಂತೆ ನಾಡಿನ ಶಿಕ್ಷಕರು ಸಂತಸಗೊಂಡಿದ್ದು ಇನ್ನಾದರೂ ಈ ಒಂದು ಬಿಲ್ ನಿಂದಾಗಿ ರಾಜ್ಯದ ಶಿಕ್ಷಕರಿಗೆ ವರ್ಗಾವಣೆ ಸಮಸ್ಯೆ ಸಂಕಷ್ಟ ಪರಿಹಾರ ಆಗುತ್ತದೆನಾ ಎಂಬುದನ್ನು ಕಾದು ನೋಡಬೇಕು.ಇನ್ನೂ ಈ ಒಂದು ಬಿಲ್ ಮಂಡನೆ ಯಿಂದಾಗಿ ನಾಡಿನ ಶಿಕ್ಷಕರು ಸಂತಸಗೊಂಡಿದ್ದು ಶಿಕ್ಷಕರು ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸಿದ್ದಾರೆ ಈ ಸಂದರ್ಭದಲ್ಲಿ ವಿಧಾನಸೌಧದಲ್ಲಿ ಮಾನ್ಯ ರಾಜ್ಯಾಧ್ಯಕ್ಷರಾದ ಶಂಭುಲಿಂಗನಗೌಡ ಪಾಟೀಲ್ ಹಾಗೂ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಶೇಖರ ನುಗ್ಗಲಿ ಹಾಗೂ ರಾಜ್ಯ ಕೋಶಾಧ್ಯಕ್ಷರಾದ ಸುರೇಶ ಶೆಡಶಾಳ ಅವರು ತಿದ್ದುಪಡಿ ವಿಧೇಯಕ ಮಂಡನೆಯಾಗುವ ಸಂದರ್ಭದಲ್ಲಿ ಉಪಸ್ಥಿತ ರಿದ್ದರು.ಇದು ಒಂದು ವಿಚಾರವಾದರೆ ಈ ಒಂದು ವಿಧೇಯಕವು ಒಳ್ಳೆಯದಾದರೆ ಸ್ವಾಗತ ಇಲ್ಲವಾದರೆ ಹೋರಾಟ ಮಾಡೊದಾಗಿ ಗ್ರಾಮೀಣ ಪ್ರೌಢಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಪವಾಡೆಪ್ಪ ಮತ್ತು ಮಹೇಶ್ ಮಡ್ಡಿ ಅವರು ಹೇಳಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.