ಬೆಂಗಳೂರು –
ಯಾರಿಗೂ ಯಾವ ಇಲಾಖೆಗೂ ಇಲ್ಲದ ಅವೈಜ್ಞಾನಿಕವಾದ ವರ್ಗಾವಣೆಯ ನೀತಿಯಿಂದಾಗಿ ನಾಡಿನ ಶಿಕ್ಷಕರು ಬೇಸ ತ್ತಿದ್ದಾರೆ. ಸೇವೆಗೆ ಸೇರಿದಾಗಿನಿಂದ ತಂದೆ ತಾಯಿ ಬಂಧು ಬಳಗ ಹೆಂಡತಿ ಮಕ್ಕಳನ್ನು ಬಿಟ್ಟು ದಿಕ್ಕಾಪಾಲಾಗಿ ಕರ್ತವ್ಯ ವನ್ನು ಮಾಡುತ್ತಿರುವ ಶಿಕ್ಷಕರು ಒಮ್ಮೆಯಾದರೂ ನಮ್ಮ ಸ್ವಂತ ಜಿಲ್ಲೆಗೆ ವರ್ಗಾವಣೆ ಕೊಡಿ ಎಂದು ಕೇಳಿ ಕೇಳಿ ಸಾಕಷ್ಟು ಬಾರಿ ಬೆಂಗಳೂರು ಚಲೋ ಸೇರಿದಂತೆ ಸಧ್ಯ ರಾಜ್ಯದ ಮೂಲೆ ಮೂಲೆಗಳಿಂದ ಜನಪ್ರತಿನಿಧಿಗಳಿಂದ ಪತ್ರಗಳನ್ನು ತಗೆದುಕೊಂಡರು ಕೂಡಾ ಶಿಕ್ಷಣ ಸಚಿವರು ಮುಖ್ಯಮಂತ್ರಿಗಳು ಸೇರಿದಂತೆ ಯಾರೂ ಕೂಡಾ ತಲೆ ಕೇಡಿಸಿಕೊಳ್ಳುತ್ತಿಲ್ಲ ಸ್ಪಂದಿಸುತ್ತಿಲ್ಲ ಇದೇಲ್ಲದರ ನಡುವೆ ಸಧ್ಯ ಸದ್ದಿಲ್ಲದೇ ಕೆಲವೊಂದಿಷ್ಟು ಶಿಕ್ಷಕರ ವರ್ಗಾವಣೆ ಯನ್ನು ಅಂದರೆ ಅಂತರ್ ವಿಭಾಗದ ಮಟ್ಟದಲ್ಲೂ ನಿಯೋಜನೆ ಮಾಡಲಾಗಿದೆ.
ಹೆಸರಿಗೆ ಮಾತ್ರ ವರ್ಗಾವಣೆ ನಿಂತಿದೆ ಆದರೆ ಒಳಗಿಂದ ಒಳಗೆ ಈ ಒಂದು ಕೆಲಸ ನಡೆಯುತ್ತಿದೆ ಎನ್ನೊದಕ್ಕೆ ಈ ಒಂದು ನಿಯೋಜನೆ ಲಿಸ್ಟ್ ಸಾಕ್ಷಿಯಾಗಿದ್ದು ಸಂಕಷ್ಟದಲ್ಲಿ ರುವ ಶಿಕ್ಷಕರಿಗೆ ನಿಯೋಜನೆ ಮಾಡಿದ್ದು ಒಳ್ಳೇಯ ವಿಚಾರ ಆದರೆ ಮಾಡೊದಾದರೆ ನಿರೀಕ್ಷೆಯಲ್ಲಿರುವ ಲಕ್ಷಾಂತರ ಶಿಕ್ಷಕರ ನೋವಿನ ಧ್ವನಿಗೆ ಶಿಕ್ಷಣ ಸಚಿವರು ಸ್ಪಂದಿಸಿದರೆ ಅದು ಅರ್ಥಪೂರ್ಣ ಅದಕ್ಕೆ ಬೆಲೆ ಬರುತ್ತದೆ ಇಲ್ಲವಾದರೆ ಬೆರಳಣಿಕೆಯಷ್ಟು ಮಾತ್ರ ಮಾಡಿದರೆ ಬೇರೆ ಅರ್ಥ ಹುಟ್ಟಿ ಕೊಳ್ಳುತ್ತಿದ್ದು ಇನ್ನಾದರೂ ಶಿಕ್ಷಕರು ದೊಡ್ಡ ಪ್ರಮಾಣದಲ್ಲಿ ಹೋರಾಟಕ್ಕೆ ಇಳಿಯುವ ಮುನ್ನ ಸಚಿವರು ಸ್ಪಂದಿಸೊದು ಅವಶ್ಯಕತೆ ಇದ್ದು ಇನ್ನೂ ಸಧ್ಯ ನಿಯೋಜನೆಗೊಂಡ ಶಿಕ್ಷಕರು ಈ ಕೆಳಗಿನಂತೆ ಇದ್ದಾರೆ.