ಸಾರಿಗೆ ನೌಕರರ ಮುಷ್ಕರ – ಅಂತ್ಯಕ್ರಿಯೆಗೆ ಹೊಗಲು ಮಗಳೊಂದಿಗೆ ಬಂದು ಬಸ್ಸಿಲ್ಲದೇ ಪರದಾಟ

Suddi Sante Desk

ಹುಬ್ಬಳ್ಳಿ –

ಕೆಲ ಬೇಡಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದಲ್ಲಿ ನಡೆಯುತ್ತಿರುವ ಸಾರಿಗೆ ನೌಕರರ ಪ್ರತಿಭಟನೆ ಮುಂದುವರೆದಿದೆ. ಮೂರನೇಯ ದಿನ ಹೋರಾಟ ಮುಂದುವರೆದಿದ್ದು ಇನ್ನೂ ಬಸ್ ಸಂಚಾರವಂತೂ ಸಂಪೂರ್ಣವಾಗಿ ಬಂದ್ ಆಗಿದೆ. ಹುಬ್ಬಳ್ಳಿ ಧಾರವಾಡದಲ್ಲೂ ಕೂಡಾ ಬಸ್ ಸಂಚಾರ ಸಂಪೂರ್ಣವಾಗಿ ಸ್ಥಬ್ದವಾಗಿದ್ದು.

ಈ ನಡುವೆ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಮಹಿಳೆಯೊಬ್ಬಳು ಬಸ್ಸು ಇಲ್ಲದೇ ಪರದಾಡುತ್ತಿರುವ ಚಿತ್ರಣ ಹುಬ್ಬಳ್ಳಿಯಲ್ಲಿ ಕಂಡು ಬಂದಿತು. ಮಂಗಳೂರಿನಿಂದ ಮಗಳೊಂದಿಗೆ ಹುಬ್ಬಳ್ಳಿಗೆ ಬಂದ ಮಹಿಳೆಯೊಬ್ಬರು ಹಳೇ ಬಸ್ ನಿಲ್ದಾಣದಲ್ಲಿಯೇ ಬಸ್ ಇಲ್ಲದೇ ಪರದಾಡುತ್ತಿದ್ದಾರೆ. ಕೊಪ್ಪಳ ಜಿಲ್ಲೆ ಕುಷ್ಟಗಿಗೆ ತೆರಳಬೇಕಾಗಿರುವ ಮಹಿಳೆ ಹಳೇ ಬಸ್ ನಿಲ್ದಾಣದಲ್ಲಿಯೇ ಇದ್ದಾರೆ. ಮಾವನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ದೂರದ ಮಂಗಳೂರಿನಿಂದ ಹುಬ್ಬಳ್ಳಿಗೆ ಬಂದಿದ್ದು ಇಲ್ಲಿಂದ ಕುಷ್ಟಗಿಗೆ ಹೋಗಲು ಬಸ್ ಇಲ್ಲದ ಕಾರಣದಿಂದಾಗಿ ನಿಲ್ದಾಣದಲ್ಲಿಯೇ ಕುಳಿತುಕೊಂಡಿದ್ದಾರೆ. ದಯಮಾಡಿ ಹೇಗಾದರೂ ಮಾಡಿ ನಮ್ಮನ್ನು ನಮ್ಮೂರಿಗೆ ಕಳಿಸಿಕೊಡಿ ಎಂದು ಮಹಿಳೆ ಮತ್ತು ಪುಟ್ಟ ಮಗು ಕೇಳಿಕೊಳ್ಳುತ್ತಿದ್ದು ಎಲ್ಲರೂ ಅಸಹಾಯಕರಾಗದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.