ಧಾರವಾಡದಲ್ಲಿ ACB ಬಲೆಗೆ ಬಿದ್ದ HDMC ನೌಕರ – ಉತಾರ ಕೊಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ವೆಂಕಟೇಶ್ ದಾಸರ ಟ್ರ್ಯಾಪ್‌…..

Suddi Sante Desk

ಧಾರವಾಡ –

ಉತಾರ ನೀಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಸಿಬ್ಬಂದಿ ಯೊಬ್ಬರು ಎಸಿಬಿ ಬಲೆಗೆ ಬಿದ್ದಿದ್ದಾರೆ.ಹೌದು ಧಾರವಾಡದ ಮಹಾ ನಗರ ಪಾಲಿಕೆಯ ವಲಯ ಕಚೇರಿ 2 ರಲ್ಲಿನ SDA ವೆಂಕಟೇಶ್ ದಾಸರ ಟ್ರ್ಯಾಪ್ ಆಗಿರುವ ನೌಕರನಾಗಿ ದ್ದಾನೆ.ಹೌದು ನಳ ಸಂಪರ್ಕ ಕ್ಕೆ ಮನೆಯ ಉತಾರ ಅವಶ್ಯಕವಾಗಿತ್ತು ಹೀಗಾಗಿ ಈ ಒಂದು ಉತಾರನ್ನು ನೀಡಲು 6000 ಸಾವಿರ ರೂಪಾಯಿ ಬೇಡಿಕೆ ಇಟ್ಟಿದ್ದರು

ಹೀಗಾಗಿ ಈ ಒಂದು ವಿಚಾರ ಕುರಿತು ಎಸಿಬಿ ಅಧಿಕಾರಿ ಗಳಿಗೆ ದೂರುದಾರ ದೂರನ್ನು ನೀಡಿದ್ದು ದೂರಿನ ಹಿನ್ನೆಲೆ ಯಲ್ಲಿ ದಾಳಿ ಮಾಡಿ ಹಣ ತೆಗೆದುಕೊಳ್ಳುವಾಗ ಟ್ರ್ಯಾಪ್ ಮಾಡಿದ್ದಾರೆ.ಎಸಿಬಿ ಎಸ್ಪಿ ಮಾರ್ಗದರ್ಶನ ದಲ್ಲಿ ಈ ಒಂದು ದಾಳಿಯಾಗಿದ್ದು ಅಧಿಕಾರಿಗಳಾದ ಮಹಾಂತೇಶ ಜಿದ್ದಿ, ಖಡಿ,ಶೇಖ್ ಅವರೊಂದಿಗೆ ಸಿಬ್ಬಂದಿ ಗಳಾದ ಲೋಕೇಶ್, ಗಿರೀಶ್ ಸೇರಿದಂತೆ ಹಲವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.