ಅಣ್ಣಿಗೇರಿ –
ಟಿವಿಎಸ್ ಏಕ್ಸಲ್ ಮತ್ತು ಕಾರ ನಡುವೆ ಮುಖಾಮುಖಿಯಾಗಿ ಒರ್ವ ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾಗಿರುವ ಘಟನೆ ಧಾರವಾಡದ ಅಣ್ಣಿಗೇರಿಯಲ್ಲಿ ನಡೆದಿದೆ.

ಅಣ್ಣಿಗೇರಿ ಪಟ್ಟಣದ ಬಂಗಾರಪ್ಪ ಕಾಲೊನಿ ಬಳಿ ಈ ಒಂದು ಅಪಘಾತ ನಡೆದಿದ್ದು ಕಾರು ಮತ್ತು ಟಿವಿಎಸ್ ಏಕ್ಸಲ್ ನಡುವೆ ಡಿಕ್ಕಿಯಾಗಿದೆ. ಅಪಘಾತಕ್ಕೇ ಬೈಕ್ ಸವಾರ ಸ್ಥಳದಲ್ಲಿಯೇ ಸಾವಿಗೀಡಾದ್ದಾರೆ.ಅಶೋಕ ಫಕೀರಪ್ಪ ಇಂಗಳಹಳ್ಳಿ (52) ಮೃತ ಬೈಕ್ ಸವಾರನಾಗಿದ್ದಾರೆ.

ಎರಡು ವಾಹನಗಳು ಪರಸ್ಪರ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೇ ಸ್ಥಳದಲ್ಲಿಯೇ ಬೈಕ್ ಮೇಲಿದ್ದ ಅಶೋಕ ಸಾವಿಗೀಡಾಗಿದ್ದಾರೆ.

ಸ್ಳಳಕ್ಕೇ ಅಣ್ಣಿಗೇರಿ ಪೊಲೀಸರು ಭೇಟಿ ಪರಿಶೀಲನೆ ಮಾಡಿದರು. Psi ಎಲ್ ಕೆ ಜೂಲಕಟ್ಟಿ, ಸಿಬ್ಬಂದಿಗಳಾದ ಸಂತೋಷ ದೇಶನೂರು,

ಎಸ್ ಎ ರಾಮನಗೌಡರ, ಅಪಘಾತದ ಸ್ಥಳಕ್ಕೇ ಭೇಟಿ ನೀಡಿ ಪರಿಶೀಲನೆ ಮಾಡಿದರು. ಇದೇ ವೇಳೆ ಪ್ರಕರಣ ದಾಖಲಿಸಿಕೊಂಡಿರುವ ಅಣ್ಣಿಗೇರಿ ಪೊಲೀಸರು ತನಿಖೆಯನ್ನು ಮಾಡ್ತಾ ಇದ್ದಾರೆ.