ಪೊಟೊ ಶೂಟ್ ದುರಂತ ನಾಪತ್ತೆಯಾದ ಇಬ್ಬರು ಶವ ಪತ್ತೆ – ಇನ್ನೊರ್ವನಿಗಾಗಿ ಮುಂದುವರಿದ ಕಾರ್ಯಾಚರಣೆ

Suddi Sante Desk

ಹುಬ್ಬಳ್ಳಿ –

ಪೊಟೊ ಶೂಟ್ ಮಾಡಲು ಹೋಗಿ ನವಲಗುಂದದ ಕಿರೇಸೂರು ಕಾಲುವೆಯಲ್ಲಿ ಜೇನು ದಾಳಿಯಿಂದ ಬಿದ್ದಿದ್ದ ಮೂವರಲ್ಲಿ ಇಬ್ಬರ ಮೃತ ದೇಹಗಳು ಪತ್ತೆಯಾಗಿವೆ.

ತಡರಾತ್ರಿವರೆಗೆ ಕಾರ್ಯಾಚರಣೆ ಮಾಡಿ ಯಾವುದೇ ರೀತಿಯ ಸುಳಿವು ಸಿಗದ ಹಿನ್ನೆಲೆಯಲ್ಲಿ ಹುಬ್ಬಳ್ಳಿಯ ಗ್ರಾಮೀಣ ಪೊಲೀಸರು ಇಂದು ಮತ್ತೆ ಬೆಳಿಗ್ಗೆ ಕಾರ್ಯಾಚರಣೆ ಆರಂಭ ಮಾಡಿದರು.

ಅಗ್ನಿಶಾಮಕ ಟೀಮ್ ನೊಂದಿಗೆ ಬೆಳಿಗ್ಗೆ ಕಾರ್ಯಾಚರಣೆ ಆರಂಭ ಮಾಡಿದ ಗ್ರಾಮೀಣ ಠಾಣೆಯ ಇನ್ಸ್ಪೆಕ್ಟರ್ ರಮೇಶ್ ಗೋಕಾಕ್, ತಹಶಿಲ್ದಾರ ಪ್ರಕಾಶ ನಾಶಿ ಮತ್ತು ಸಿಬ್ಬಂದಿ ಗಳು ಅರ್ಧ ಗಂಟೆಯಲ್ಲಿ ಗಜಾನನ ಯುವಕನ ಮೃತ ದೇಹ ಪತ್ತೆಯಾಗಿದೆ.

ಇನ್ನೊರ್ವನ ದೇಹ ಅಣ್ಣಿಗೇರಿ ಬಸಾಪೂರ ಗೇಟ್ ಬಳಿ ಸಿಕ್ಕಿದ್ದು ಇನ್ನೊರ್ವನಿಗಾಗಿ ಶೋಧ ಕಾರ್ಯ ಮುಂದುವರಿದಿದೆ‌. ಗ್ರಾಮೀಣರು ಪೊಲೀಸ್ ಇನ್ಸ್ಪೆಕ್ಟರ್ ರಮೇಶ್ ಗೋಕಾಕ್, ಸಿಬ್ಬಂದಿ ಗಳಾದ ನಾರಾಯಣ ಹಿರೇಹೊಳಿ ಸೇರಿದಂತೆ ಹಲವು ಸಿಬ್ಬಂದಿ ಗಳು ಸ್ಥಳದಲ್ಲಿದ್ದಾರೆ‌‌.

ನಿನ್ನೆ ಇಬ್ಬರನ್ನು ರಕ್ಷಣೆ ಮಾಡಲಾಗಿದ್ದು ಮೂವರು ಕಾಲುವೆಯಲ್ಲಿ ಬಿದ್ದಿದ್ದರು ಹುಬ್ಬಳ್ಳಿಯ ರಾಮನಗರದ ಕಲ್ಲಗುಂಟ್ಲಾ ಮತ್ತು ಭಂಡಾರಿ ಕುಟುಂಬದ ಯುವಕರಾಗಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.