ಕಾರು ಪಲ್ಟಿ ಸ್ಥಳದಲ್ಲೇ ಇಬ್ಬರು ಸಾವು – ಇಬ್ಬರು ತೀವ್ರ ಗಾಯ ಧಾರವಾಡದ ಮುಲ್ಲಾ ಡಾಬಾ ಬಳಿ ನಡೆದ ಘಟನೆ…..

Suddi Sante Desk

ಧಾರವಾಡ –

ಕಾರೊಂದು ಪಲ್ಟಿಯಾಗಿ ಇಬ್ಬರು ಸಾವಿಗೀಡಾದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಪುನಾ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆಳ ಗಾವಿ ರಸ್ತೆಯಲ್ಲಿನ ಕೆರೆ ಮುಲ್ಲಾ ದಾಬಾ ಬಳಿ ನಡೆ ದಿದೆ.

ಧಾರವಾಡದ ನಿವಾಸಿಗಳಾಗಿರುವ ಇವರುಬೆಳಗಾವಿ ಯಿಂದ ಧಾರವಾಡದ ಕಡೆಗೆ ಬರುತ್ತಿದ್ದರು.ಬೆಳಗಾವಿ ಯಿಂದ ಮರಳಿ ಬರುವಾಗ ಕೆರೆ ಮುಲ್ಲಾ ದಾಬಾ ಬಳಿ ವೇಗವಾಗಿ ಬರುವ ಸಮಯದಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ನಾಲ್ಕೈದು ಪಲ್ಟಿಯಾಗಿದೆ

ಪಲ್ಟಿಯಾಗಿ ಬಿದ್ದಿದೆ ಪರಿಣಾಮ ಸ್ಥಳದಲ್ಲೇ ಒರ್ವ ಶಿಕ್ಷಕ ಸೇರಿದಂತೆ ಇಬ್ಬರು ಸಾವಿಗೀಡಾಗಿದ್ದಾರೆ‌. ಮುಜಾವಿಲ್ಲ ಆದೋನಿ, ಮಹಾಜ ಪಠಾಣ, ಸಾವಿಗೀಡಾದ ದುರ್ದೈವಿಗಳಾಗಿ ದ್ದಾರೆ‌‌.

ಇನ್ನೂ ಇಬ್ಬರು ತೀವ್ರವಾಗಿ ಗಾಯಗೊಂಡು SDM ಆಸ್ಪತ್ರೆಗೆ ದಾಖಲಾಗಿದ್ದಾರೆ.ಧನವೀರ್ ಸೌದಾಘರ್ ಮತ್ತು ಸೂಫಿಯಾನ್ ಶೇಖ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಇನ್ನೂ ಸುದ್ದಿ ತಿಳಿದ ಧಾರವಾಡ ಗ್ರಾಮೀಣ ಇನ್ಸ್ಪೆ ಕ್ಟರ್ ವಿ ಎಸ್ ಪಾಟೀಲ್,ಹೆದ್ದಾರಿಯ ಗಸ್ತು ಪೊಲೀ ಸ್ ಸಿಬ್ಬಂದಿ ಗಳಾದ

S S ಗೋಲಂದರಾಜ್, V M ಆಶ್ರೀಫ್, V U ಬಳ್ಳಾರಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.