ಹುಬ್ಬಳ್ಳಿ –
ಸದಾ ಒಂದಿಲ್ಲೊಂದು ವಿಶೇಷತೆಗಳ ಮೂಲಕ ಗಮನ ಸೆಳೆಯುತ್ತಿರುವ ಕಾಂಗ್ರೇಸ್ ಪಕ್ಷದ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ ಮತ್ತು ಪರಿವಾರದವರು ಮತ್ತೊಂದು ವಿಶೇಷತೆಯ ಮೂಲಕ ಗಮನ ಸೆಳೆದಿದ್ದಾರೆ.ಹೌದು ಅಧಿಕಾರವೇ ಮುಖ್ಯವಲ್ಲ ಸಾಮಾಜಿಕ ಜವಾಬ್ದಾರಿ ಮುಖ್ಯ ಎಂದುಕೊಂಡು ಸದಾ ಜನರ ಸೇವೆಯನ್ನು ಮಾಡುತ್ತಿರುವ ಹುಬ್ಬಳ್ಳಿಯ ಉಳ್ಳಾಗಡ್ಡಿಮಠ ಪರಿವಾರದವರು ಈಗ ಕ್ರೀಸ್ಮಸ್ ಹಬ್ಬವನ್ನು ಮುಂಚಿತವಾಗಿ ಕ್ರೈಸ್ತ ಧರ್ಮದ ಬಂಧುಗಳೊಂದಿಗೆ ಚರ್ಚ್ ನಲ್ಲಿ ವಿಶೇಷವಾಗಿ ಸ್ವಾಗತ ಮಾಡಿಕೊಂಡರು.
ಹೌದು ನೂರಾರು ಮಹಿಳೆಯರೊಂದಿಗೆ ನಗರದ ಸೇಂಟ್ ಲೂಥರ್ನ್ ಚರ್ಚ್ ನಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಕ್ರಿಸ್ಮಸ್ ಹಬ್ಬವನ್ನು ವಿಶೇಷ ವಾಗಿ ಸ್ವಾಗತ ಮಾಡಿಕೊಳ್ಳಲಾಯಿತು. ಕಾರ್ಯ ಕ್ರಮದಲ್ಲಿ ಪ್ರಮುಖವಾಗಿ ಕಾಂಗ್ರೇಸ್ ಪಕ್ಷದ ಯುವ ನಾಯಕ ರಜತ್ ಉಳ್ಳಾಗಡ್ಡಿಮಠ ಅವರ ಮಾತೋಶ್ರೀ ಶ್ರೀಮತಿ ಸುನಿತಾ ಮತ್ತು ರಜತ್ ಉಳ್ಳಾಗಡ್ಡಿಮಠ ಅವರ ಧರ್ಮಪತ್ನಿ ಸುಶ್ಮಿತಾ ಅವರು ಮಹಿಳೆಯರೊಂದಿಗೆ ಸೇರಿಕೊಂಡು ಹಬ್ಬವನ್ನು ಬರಮಾಡಿಕೊಂಡರು.
ಇದೇ ವೇಳೆ ಹಬ್ಬದ ಹಿನ್ನಲೆಯಲ್ಲಿ 115 ಮಹಿಳೆಯರಿಗೆ ವಿಶೇಷವಾದ ಹಬ್ಬದ ಉಡುಗೊರೆಗಳನ್ನು ನೀಡಿ ಶುಭ ಹಾರೈಸಿದರು.ಈ ಒಂದು ಸಮಯದಲ್ಲಿ ಪಾಲಿಕೆ ಸದಸ್ಯೆ ಶ್ರೀಮತಿ ಸುವರ್ಣ ಕಲ್ಲುಕುಂಟ್ಲ ಅವರು ಕೂಡಾ ಉಪಸ್ಥಿತರಿದ್ದು ಉಳ್ಳಾಗಡ್ಡಿಮಠ ಪರಿವಾರ ದೊಂದಿಗೆ ನೂರಾರು ಮಹಿಳೆಯರಿಗೆ ಉಡು ಗೊರೆಗಳನ್ನು ವಿತರಿಸಿ ಶುಭ ಹಾರೈಸಿದರು.
ಸುದ್ದಿ ಸಂತೆ ನ್ಯೂಸ್ ಹುಬ್ಬಳ್ಳಿ..