ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಪ್ತ ಕ್ಷೌರಿಕ ನಾಗೇಶ ಸದರ್ಲು ನಿಧನ – ಕುಟುಂಬಕ್ಕೆ ಸಾಂತ್ವನ ಹೇಳಿ ಸಹಾಯ ಮಾಡಿದ ಕೇಂದ್ರ ಸಚಿವರು…..

Suddi Sante Desk

ಬೆಂಗಳೂರು –

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರ ಆಪ್ತ ಕ್ಷೌರಿಕ ನಾಗೇಶ್ ಸದರ್ಲು ಹುಬ್ಬಳ್ಳಿಯಲ್ಲಿ ನಿಧನರಾಗಿದ್ದಾರೆ ಹೌದು ಅತ್ಯಂತ ಆತ್ಮೀಯರಾಗಿದ್ದ ಮತ್ತು ಬಹಳ ವರ್ಷ ಗಳಿಂದ ಕ್ಷೌರಿಕರಾಗಿದ್ದ ನಾಗೇಶ ಸದರ್ಲು ಅವರು ನಿಧನಕ್ಕೆ ಸಂತಾಪವನ್ನು ಕೇಂದ್ರ ಸಚಿವರು ಸೂಚಿಸಿ ಅವರ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿದರು

ಅವರ ಅಗಲಿಕೆಯಿಂದ ತುಂಬಾ ದುಃಖವಾಗಿದೆ ಎನ್ನುತ್ತಾ
ದೆಹಲಿ ಯಿಂದ ಹುಬ್ಬಳ್ಳಿಗೆ ಆಗಮಿಸಿದ ತಕ್ಷಣ ನೇರವಾಗಿ ಅವರ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿದರು.ತುಂಬಾ ಪರಿಶ್ರಮದಿಂದ ಕಾರ್ಯನಿರ್ವಹಿಸು ತ್ತಿದ್ದ ನಾಗೇಶ ಅವರ ನಿಧನದಿಂದ ಕುಟುಂಬ ಆಘಾತಕ್ಕೆ ಒಳಗಾದ ಈ ಸಂದರ್ಭದಲ್ಲಿ ಅವರ ಕುಟುಂಬಕ್ಕೆ ವಯಕ್ತಿಕ ವಾಗಿ ಸಹಾಯನೀಡಿ ಭವಿಷ್ಯದಲ್ಲಿ ಏನೇ ಸಹಾಯ ಸಹಕಾರ ಬೇಕಾದಲ್ಲಿ ನಾವು ಅವರೊಂದಿಗೆ ಇರುತ್ತೇವೆ ಎಂದು ಧೈರ್ಯದ ಮಾತನ್ನು ನೀಡಿದರು.ಈ ಒಂದು ಸಮಯದಲ್ಲಿ ಪಕ್ಷದ ಮುಖಂಡರು ಆಪ್ತರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.