ಅತ್ಯಾಚಾರ ಮಾಡಿದ ಆರೋಪಿ ಗಳನ್ನು ಬಂಧಿಸಿ – ಧಾರವಾಡದಲ್ಲಿ ವಿಶ್ವ ಹಿಂದೂ ಪರಿಷತ್ ಆಗ್ರಹ ಮನವಿ…..

Suddi Sante Desk

ಧಾರವಾಡ –

ಗದಗ ಜಿಲ್ಲೆಯ ನರಗುಂದ ತಾಲುಕಿನಲ್ಲಿ ಮಧುಶ್ರೀ ಹುಲಸೂರ ಅಪ್ರಾಪ್ತಿ ಬಾಲಕಿಯನ್ನು ಲವ್ ಜಿಹಾದ್ ಮಾಡಿ,ಅವಳ ಮೇಲೆ ಅತ್ಯಾಚಾರ ಮಾಡಿ ಕ್ರೂರ ವಾಗಿ ಹತ್ಯೆ ಮಾಡಿದಕ್ಕೆ ಧಾರವಾಡದಲ್ಲೂ ಖಂಡನೆ ವ್ಯಕ್ತವಾಗಿದೆ. ಘಟನೆಯನ್ನು ಖಂಡಿಸಿ ಹಾಗೆ ಆರೋ ಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾ ಯ ಕೇಳಿ ಬಂದಿದೆ.

ಅವನ ಜೊತೆ ಕೆಲವೊಂದಷ್ಟು ಜಿಹಾದಿಗಳು ಸೇರಿ, ಈ ಕೃತ್ಯವನ್ನು ಮಾಡಿದ್ದಾರೆಂದು ಹಾಗೇ ಈ ಒಂದು ಘಟನೆಯ‌‌ನ್ನು ಖಂಡಿಸಿ ನಗರದಲ್ಲಿ ವಿಶ್ವ ಹಿಂದು ಪರಿಷದ್ ಬಜರಂಗದಳ ಧಾರವಾಡ ಜಿಲ್ಲೆಯಿಂದ ಜಿಲ್ಲಾಧಿಕಾರಿ ಗಳ ಮುಖಾಂತರ ಕೇಂದ್ರ ಗ್ರಹ ಮಂತ್ರಿ ಭಾರತ ಸರ್ಕಾರ ಇವರಿಗೆ ಮನವಿ ಸಲ್ಲಿಸ ಲಾಯಿತು.

ಈ ಮನವಿಯಲ್ಲಿ ಜಿಹಾದಿಗಳಿಗೆ ಗಲ್ಲು ಶಿಕ್ಷೆಗೆ ಒಳ ಪಡಿಸಬೇಕೆಂದು ಒತ್ತಾಯಿಸಲಾಯಿತು. ಆದಷ್ಟು ಬೇಗ ಕರ್ನಾಟಕದಲ್ಲಿ ಲವ್ ಜಿಹಾದ್ ಕಾನೂನು ತರಬೇಕೆಂದು ಒತ್ತಾಯಿಸಲಾಯಿತು. ಮನವಿ ಕೊಡುವ ಸಂದರ್ಭದಲ್ಲಿ ಧಾರವಾಡ ನಗರ ಸಹ ಸಂಚಾಲಕ ಬಜರಂಗದಳ ಸಿದ್ದು ಹಿರೇಮಠ, ಮಾಹಾದೇವ ಕೋರಿ ಜಿಲ್ಲಾ ಗೋ ರಕ್ಷಾ ಪ್ರಮುಖ ಸುರೇಶ್ ಭಜಂತ್ರಿ ಜಿಲ್ಲಾ ಸುರಕ್ಷಾ ಪ್ರಮುಖ, ಗುರುಶಾಂತ ಹಿರೇಮಠ ಬಜರಂಗದಳ,ಭಿಮಾಭಟ್ ಜೋಶಿ,ಬಜರಂಗದಳ,ಸಾಯಿನಾಥ್ ಚುರುಮರಿ, ಬಜರಂಗದಳ, ಪವನ್ ಕಟಾರೆ,ಇನ್ನೂ ಹಲವಾರು ಬಜರಂಗದಳ ಕಾರ್ಯಕರ್ತರು ಉಪಸ್ಥಿತಿ ಇದ್ದರು.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.