ತಂದೆಯ ಸ್ಥಾನಕ್ಕೆ ಗೆದ್ದು ಬಂದ ಮಗ – ಧಾರವಾಡದ ನಿಗದಿ ಗ್ರಾಮ ಪಂಚಾಯತ ನಾಗಪ್ಪ ದಾಸನಕೊಪ್ಪ ರನ್ನು ಕೈ ಹಿಡಿದ ಮತದಾರರು…..

Suddi Sante Desk

ಧಾರವಾಡ –

ಧಾರವಾಡದ ನಿಗದಿ ಗ್ರಾಮ ಪಂಚಾಯತ ನ ಒಂದು ವಾರ್ಡ್ ಗೆ ನಡೆದ ಉಪ ಚುನಾವಣೆಯಲ್ಲಿ ಸಂತೋಷ ನಾಗಪ್ಪ ದಾಸನಕೊಪ್ಪ ಗೆಲುವು ಸಾಧಿಸಿದ್ದಾರೆ.

ಈ ಹಿಂದೆ ಇದೇ ವಾರ್ಡ್ ನಲ್ಲಿ ನಾಗಪ್ಪ ದಾಸನಕೊಪ್ಪ ಗೆಲುವು ಸಾಧಿಸಿ ಅಧ್ಯಕ್ಷರಾಗಿದ್ದರು. ಜನರ ಸೇವೆ ಮಾಡ ಬೇಕು ಎಂಬ ಒಂದೇ ಒಂದು ಕಾರಣಕ್ಕಾಗಿ ಆಸ್ತಿಯನ್ನು ಮಾರಾಟ ಮಾಡಿ ಟ್ಯಾಕ್ಟರ್ ನ್ನು ಕೂಡಾ ಮಾರಾಟ ಮಾಡಿ ಸ್ಪರ್ಧೆ ಮಾಡಿ ಗೆಲುವನ್ನು ಸಾಧಿಸಿ ಅಧ್ಯಕ್ಷರಾಗಿ ಇನ್ನೇನು ಅಧಿಕಾರ ಮಾಡಬೇಕು ಎನ್ನುವಷ್ಟರಲ್ಲಿಯೇ ಮೃತರಾಗಿದ್ದು ಇವರ ನಿಧನದಿಂದಾಗಿ ತೆರವಾಗಿದ್ದು ಈ ಒಂದು ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನಾಗಪ್ಪ ಅವರ ಮಗ ಸಂತೋಷ ಸ್ಪರ್ಧೆ ಮಾಡಿದ್ದರು ತೀವ್ರ ಹಣಾಹಣೆಯ ನಡುವೆ ಕೊನೆಗೂ ಸಂತೋಷ ಅವರನ್ನು ಮತದಾರರು ಕೈ ಹಿಡಿದು ಗೆಲುವಿನ ಮಾಲೆ ಹಾಕಿದ್ದಾರೆ.

ಇಂದು ನಡೆತ ಮತ ಏಣಿಕೆಯಲ್ಲಿ ನಾಗಪ್ಪ ಅವರ ಪುತ್ರ ಸಂತೋಷನನ್ನು ವಾರ್ಡ್ ನ ಜನರು ಮತದಾರರು ಗೆಲ್ಲಿಸಿ ಸೇವೆಗೆ ಅವಕಾಶವನ್ನು ನೀಡಿದ್ದಾರೆ.ಇನ್ನೂ ಯುವಕ ನಾಗಿರುವ ಇವನಿಗೆ ಗ್ರಾಮಸ್ಥರ ಪರವಾಗಿ ಗ್ರಾಮದ ನಿಂಗಪ್ಪ ಮಡಿವಾಳರ ಮತ್ತು ಟೀಮ್ ನವರು ಅಭಿನಂ ದನೆ ಸಲ್ಲಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.