ನಾಳೆ ವಿಕೇಂಡ್ ಕರ್ಫ್ಯೂ – ಬಸ್ ಸೌಲಭ್ಯಗಳಿದ್ದರೆ ಶಿಕ್ಷಕರು ಶಾಲೆಗೆ ಹೋಗಲಿ ಇಲ್ಲವಾದರೆ ಮನೆಯಲ್ಲಿ ಕೆಲಸ ಮಾಡಲಿ ಧಾರವಾಡ ಡಿಡಿಪಿಐ ಸೂಚನೆ…..

Suddi Sante Desk

ಧಾರವಾಡ –

ನಾಳೆ ವಿಕೇಂಡ್ ಕರ್ಫ್ಯೂ ಹಿನ್ನಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿನ ಶಿಕ್ಷಕರು ಬಸ್ ಸೌಲಭ್ಯಗಳಿದ್ದರೆ ಶಾಲೆ ಗಳಿಗೆ ಹೋಗಲಿ ಇಲ್ಲವಾದರೆ ಮನೆಯಲ್ಲಿಂದಲೇ ಕೆಲಸವನ್ನು ಮಾಡಲಿ ಎಂದು ಧಾರವಾಡ ಡಿಡಿಪಿಐ ಮೋಹನಕುಮಾರ ಹಂಚಾಟೆ ಹೇಳಿದರು. ಸುದ್ದಿ ಸಂತೆ ಯೊಂದಿಗೆ ಮಾತನಾಡಿದ ಅವರು ರಾಜ್ಯ ಸರ್ಕಾರದ ಸೂಚನೆಯಂತೆ ಧಾರವಾಡ ಜಿಲ್ಲೆಯ ಲ್ಲೂ ಕೂಡಾ ವಿಕೇಂಡ್ ಕರ್ಫ್ಯೂ ವನ್ನು ಜಾರಿ ಮಾಡಲಾಗಿದೆ.ಜಿಲ್ಲಾಧಿಕಾರಿಗಳು ಜಿಲ್ಲೆಯಲ್ಲಿ ಕೂಡಾ ಇದನ್ನು ಜಾರಿಗೆ ಮಾಡಿದ್ದಾರೆ. ಹೀಗಾಗಿ ನಾಳೆ ಬಸ್ ಆರಂಭವಾಗುತ್ತವೆ ಇಲ್ಲ ಗೊತ್ತಿಲ್ಲ ಬಸ್ ಇದ್ದರೆ ನಮ್ಮ ಶಿಕ್ಷಕರು ಶಾಲೆಗಳಿಗೆ ಹೋಗಲಿ ಯಾವುದೇ ತೊಂದರೆಯನ್ನು ತಗೆದುಕೊಂಡು ಶಾಲೆಗಳಿಗೆ ಹೋಗೊದು ಬೇಡ

ಬಸ್ ಸೌಲಭ್ಯ ಗಳಿದ್ದರೆ ಮಾತ್ರ ಶಾಲೆಗಳಿಗೆ ಹೋಗಬೇಕು ಇಲ್ಲ ವಾದರೆ ಮನೆಯಲ್ಲಿಯೇ ಕುಳಿತುಕೊಂಡು ಶೈಕ್ಷಣಿಕ ಚಟುವಟಿಕೆಯ ಕೆಲಸ ಕಾರ್ಯಗಳನ್ನು ಶಿಕ್ಷಕರು ಮಾಡಬೇಕೆಂದು ಹೇಳಿ ದರು.ಇದರೊಂದಿಗೆ ಜಿಲ್ಲೆಯ ಶಿಕ್ಷಕರ ನೆರವಿಗೆ ಸಾರ್ವಜನಿಕರ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮೋಹನಕುಮಾರ ಹಂಚಾಟೆ ಮುಂದಾಗಿದ್ದು ಯಾವುದೇ ಕಾರಣಕ್ಕೂ ವಿಕೇಂಡ್ ಕರ್ಫ್ಯೂ ಹಿನ್ನಲೆಯಲ್ಲಿ ಈ ಒಂದು ಸೌಲಭ್ಯಗಳನ್ನು ಪಡೆದುಕೊಳ್ಳುವಂತೆ ಶಿಕ್ಷಕರಿಗೆ ಸೂಚನೆ ನೀಡಿದ್ದಾರೆ. ಇನ್ನೂ ಈ ಮೊದಲು ಬಸ್ ಸೌಲಭ್ಯ ಕುರಿತು ಇದೆ ಎಂದು ಹೇಳಿದ್ದರು ಆ ಒಂದು ಸುದ್ದಿ ಯಿಂದಾಗಿ ಎಚ್ಚೆತ್ತುಕೊಂಡ DDPI ಅವರು ಈಗ ಸಮಸ್ಯೆ ಅರಿತುಕೊಂಡು ಸ್ಪಷ್ಟ ಪಡಿಸಿದ್ದಾರೆ.

Share This Article
WhatsApp

Don't Miss Out! Join Our WhatsApp Group Today!

Get the latest news, updates, and exclusive content delivered straight to your WhatsApp.